ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, March 13, 2008

ತಲೆ-ಇಲ್ಲ !!

ಬರ್ಮಾ ಬಜಾರಿನಲ್ಲಿ ಬರ್ಮಾ ಇಲ್ಲ,

ಚೀನಾ ಮಾರ್ಕೆಟ್ನಲ್ಲಿ ಚೀನಾ ಇಲ್ಲ,

ಮೈಸೂರ್ ಪಾಕಿನಲ್ಲಿ ಮೈಸೂರೆ ಇಲ್ಲಾ,

ಮದ್ದೂರು ವಡೆಯಲ್ಲಿ ಮದ್ದೂರೆ ಇಲ್ಲಾ!

ಯಾರಾದರು ಹೀಗೆ ಹೇಳಿದರೆ ಹೇಳಿದವರ ತಲೆಯಲ್ಲಿ ಏನು ಇಲ್ಲವೇ ಇಲ್ಲ

ಅನ್ನಲು ಅಡ್ಡಿಯು ಇಲ್ಲ!!!



ಗಣ್ಯ ವ್ಯಕ್ತಿಯು ಮಹಾ ಕಾವ್ಯ ಅನುವಾದಿಸಿದ ಬಗೆ.

(ವಿಶೇಷ ಸೂಚನೆ : ಇದು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿರುವುದಿಲ್ಲ )


ಗಣ್ಯ ವ್ಯಕ್ತಿಯೊಬ್ಬರಿಗೆ ಹಳೆಗನ್ನಡದ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸುವ ಮನಸ್ಸಾಯಿತು,

ತಕ್ಷಣ ತಮಗೆ ಪರಿಚಯವಿದ್ದ (ಹಣಕ್ಕೆ ತಮ್ಮನ್ನೇ ಮಾರಿಕೊಳ್ಳುವ) ಕವಿಗಳಿಗೆ

ಆಹ್ವಾನ ಕಳಿಸಿ ಕರೆಯಿಸಿದರು ಮನೆಗೆ, ಅವರು ಮಾಡಬೇಕಿದ್ದ

ಕೆಲಸ ತುಂಬಾ ಸರಳ, ತಮ್ಮ ಮುಂದಿರುವ ಹಳೆಗನ್ನಡದ

ಮಹಾ ಕಾವ್ಯವನ್ನು ಕನ್ನಡಕ್ಕೆ ಅರ್ಥೈಸಿ ಬರೆದಿಡುವುದು, (ಎಲ್ಲರಿಗೂ ಬೇರೆ ಬೇರೆ ಅಧ್ಯಾಯ ನೀಡಿದರು )

ನಂತರ ಎಲ್ಲಾ ಕವಿಗಳು ಬರೆದಿಟ್ಟ ಅಧ್ಯಾಯಗಳನ್ನು ಒಟ್ಟುಗೂಡಿಸಿದರು, ಹೀಗೆ ಮಹಾ ಕಾವ್ಯವನ್ನು ಅನುವಾದಿಸಿದರು.

Wednesday, March 12, 2008

ತಿಗಣೆ ಕೊಲ್ಲುವ ಯಂತ್ರ!

ಪತ್ರಿಕೆಯಲ್ಲಿ ಬಂದಿತ್ತು ಜಾಹಿರಾತು..
ಕೇವಲ ೫೦೦ರೂಪಾಯಿಗೆ ತಿಗಣೆ ಕೊಲ್ಲುವ ಯಂತ್ರ
ಸಂಪರ್ಕಿಸಿ:
ಚಿಕ್ಕ ಕಲ್ಲಪ್ಪ
ಬಿನ್ ದೊಡ್ಡ ಕಲ್ಲಪ್ಪ
ಮರಿಕಲ್ಲಿನ ಪಾಳ್ಯ
ಮುಂಬೈ-೪೨೦
ಓದಿದ ನಾನು ತಡಮಾಡದೆ ಕಳಿಸಿಯೇ ಬಿಟ್ಟೆ ೫೦೦ರೂಪಾಯಿ,
ಒಂದು ತಿಂಗಳ ನಂತರ ಬಂದಿತ್ತು ನನಗೆ ಪಾರ್ಸೆಲ್ಲು ,
ಸಂತಸದಿಂದ ತೆರೆದು ನೋಡಿದರೆ ಇತ್ತು ಎರೆಡು ಕಲ್ಲು
ಜೊತೆಗೆ ಇತ್ತು ಬಳಸುವ ವಿಧಾನ
"ಒಂದು ಕಲ್ಲಿನ ಮೇಲೆ ತಿಗಣೆ ಇಟ್ಟು ಇನ್ನೊಂದು ಕಲ್ಲಿನಿಂದ ಜಪ್ಪಿದರೆ ತಿಗಣೆ ಸಾಯುತ್ತದೆ ಎಂದು!".

Tuesday, March 11, 2008

ತಬ್ಬಲಿ

ಅವಳು ಇಲ್ಲದೆ ನಾನಾದೆ ತಬ್ಬಲಿ
ಕಾಯುತಿದ್ದೇನೆ ಇವಳಾದರು ಬಂದು ತಬ್ಬಲಿ ಎಂದು!

Monday, March 10, 2008

ಹುಡುಕಾಟ!

ಮುಂಜಾನೆಯ ಇಬ್ಬನಿಯಲ್ಲಿ
ಮಧ್ಯಾನ್ಹದ ಉರಿ ಬಿಸಿಲಲ್ಲಿ
ಮುಸ್ಸಂಜೆಯ ತಂಗಾಳಿಯಲ್ಲಿ
ರಾತ್ರಿಯ ಬೆಳದಿಂಗಳ ಭಾನಲ್ಲಿ
ಹುಡುಕುತ್ತಲೇ ಇದ್ದೇನೆ!

Sunday, March 9, 2008

ಅವಳು ನಕ್ಕಾಗ. (ಕಲ್ಪನಾ ಲೋಕ )

ಅಂದು ಅವಳು ನಕ್ಕಾಗ
ನನ್ನೆದೆಯಲ್ಲಿ ಜಗಮಗಿಸಿದವು ಸಾವಿರ ಬಲ್ಬುಗಳು!
ಆ ಕಲ್ಪನಾಲೋಕದಲ್ಲೆ ತಿಂಗಳೆಲ್ಲ ಕಳೆದೆ,
ತಿಂಗಳ ಕೊನೆಯಲ್ಲಿ ಕೆ.ಇ.ಬಿ ಬಿಲ್ಲು ಬಂದಿತ್ತು ಎರೆಡು ಸಾವಿರ!!
ಆಗ ಬಂದೆ ತಿರುಗಿ ವಾಸ್ತವ ಲೋಕಕ್ಕೆ!!!!