ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Wednesday, April 9, 2008

ವಿಜಯ ಕರ್ನಾಟಕ ಕನ್ನಡಿಗರ ಎಮ್ಮೆ !!!!!!

ಏನಿದು ತಲೆ ಬರಹ "ಹೆಮ್ಮೆ" ಬರೆಯಲು "ಎಮ್ಮೆ" ಎಂದು ಬರೆದಿದ್ದಾರಲ್ಲ ಎಂದು ಯೋಚಿಸುತ್ತಿದ್ದರೆ ಕೆಳಗೆ ಕಾಣುವ ಚಿತ್ರ ನೋಡಿ.. ಇದು ವಿಜಯ ಕರ್ನಾಟಕದಲ್ಲಿ ಮುದ್ರಿತವಾದ ಜಾಹೀರಾತು, ಈ ಜಾಹೀರಾತಿನಲ್ಲೂ ಒಂದೇ ಅಕ್ಷರ ತಪ್ಪು "ಹರಟೆ" ಬರೆಯಲು "ಹಗಟೆ" ಎಂದಾಗಿದೆ,

ಕರ್ನಾಟಕದ ನಂ.೧ ಜಾಹೀರಾತು ಪತ್ರಿಕೆ(ಒಂದಾದರೂ ಜಾಹೀರಾತಿಲ್ಲದ ಪುಟ ಇದೆಯೇ? ಖಂಡಿತ ಇರಲಾರದು!) ಒಂದೇ ಸಾರಿ ತಪ್ಪು ಮುದ್ರಿತವಾಗಿದ್ದರೆ ಕಣ್ಣು ತಪ್ಪಿನದಾಗಿರಬಹುದು ಎನ್ನಬಹುದಾಗಿತ್ತು ಆದರೆ ಎರಡನೆ ಸಾರಿಯೂ ಅದೇ ತಪ್ಪು ಪುನರಾವರ್ತನೆ ಆಗಿದೆ.. ದಿನಾಂಕ 24/03/2008 ಮತ್ತು ದಿನಾಂಕ 5/04/2008 ವಿ.ಕ ಎಮ್ಮೆ ನೋಡಿ!

Sunday, April 6, 2008

ಯಾರಿವಳು ಎಲ್ಲಿಂದ ಬಂದವಳು

ಇವಳೇನು ಸ್ವಪ್ನ ಲೋಕದ ಸುಂದರಿಯೋ..

ದೇವಲೋಕದ ಅಪ್ಸರೆಯೋ..

ಧರೆಗಿಳಿದ ರಂಭೆಯೋ..

ಯಾರಿವಳು.. ಕನಸಿನ ಲೋಕದ ಕಿನ್ನರಿಯೋ ಎಂದು ನೋಡುತ್ತಿದ್ದೆ,

ಆಗ ಸೂರ್ಯ ದೇವನು ಉದಯಿಸಿ..

ನಿಧ್ರಾದೇವಿಯು ಬಿಟ್ಟು ಹೊರಟಿದ್ದಳು

ತಟ್ಟನೆ ಎಚ್ಚರವಾಗಿ ಎದ್ದುಕುಳಿತೆ ಹಾಸಿಗೆಯ ಮೇಲೆ!

ಮೊಗದಲಿ ಮಂದಹಾಸ ಮೂಡಿ ಕನಸಾ ಬಿದ್ದದ್ದು ಎಂದು ನನ್ನನ್ನು ನಾನೇ ಕೇಳಿಕೊಂಡೆ.

Friday, April 4, 2008

ಭಾವ "ಜೀವಿ"

ಅಕ್ಕನಿಗೆ ಮದುವೆ ಆಗಿ ಸ್ವಲ್ಪ ಸಮಯವಾಗಿತ್ತು..
ಭಾವನ ಬಗ್ಗೆ ತಿಳಿದುಕೊಳ್ಳೋಣ ಎಂದು ಫೋನ್ ಮಾಡಿ ಕೇಳಿದೆ "ಅಕ್ಕ ಭಾವ ಹೇಗೆ" ಎಂದು?
ಯಾವಾಗಲು ಚುಟುಕಾಗಿ ಉತ್ತರಿಸುವ ಅಕ್ಕ ಹೇಳಿದಳು ಭಾವ "ಜೀವಿ" ಎಂದು!
ನಾನು ತಬ್ಬಿಬ್ಬು.. ಭಾವ ಜೀವಿಯೇ?
ಅಕ್ಕ ಏಕೆ ಭಾವನಿಗೆ ಜೀವಿ ಎಂದಳು ಎಂದು?!
ನಂತರ ತಿಳಿಯಿತು ಭಾವನೆಯ ಲೋಕದಲ್ಲಿಯೇ ಇರುವ ಮನುಷ್ಯರನ್ನು
ಭಾವ ಜೀವಿಗಳೆಂದು ಕರೆಯುತ್ತಾರೆ ಎಂದು!
ಆದರೂ ಜೀವಿ ಎಂದರೆ ಪ್ರಾಣಿ
ಎಂದಾಯಿತಲ್ಲವೇ ಎಂದು ಯೋಚಿಸುತ್ತಿದ್ದೇನೆ!
ನಿಮಗೇನಾದರೂ ಗೊತ್ತೆ ಭಾವ ಜೀವಿ ಅನ್ನುವ ಪಧ ಹೇಗೆ ಬಂತು ಎಂದು?

Tuesday, April 1, 2008

ಆಗ ವೆನಿಲ್ಲ ಈಗ ಏನಿಲ್ಲ !

ರೆಡು ವರ್ಷದ ಹಿಂದೆ ವೆನಿಲಕ್ಕೆ ಬಂಗಾರದ ಬೆಲೆ ಬಂದಿತ್ತು ಆಗ ಮದುವೆ ಮುಂಜಿಯಲ್ಲಿ ಜನರು ಮಾತನಾಡುತ್ತಿದ್ದ ವಿಷಯ ವೆನಿಲ ವೆನಿಲ...ಕೇಳುತ್ತಿದ್ದರು "ನಿಮ್ಮ ಮನೆಯಲ್ಲಿ ಎಷ್ಟು ವೆನಿಲ್ಲ ಬಳ್ಳಿ ಇದೆ ಎಂದು". ಬಳ್ಳಿ ಹಾಕಿಲ್ಲ ಎಂದು ಯಾರಾದರು ಹೇಳಿದರೆ ಇವನು ಏನು ತಿಳಿಯದ ದಡ್ಡ ಎನ್ನುವಂತೆ ನೋಡುತ್ತಿದ್ದರು ಆಗ!. ತೋಟಕ್ಕೆ ಹೋದರೆ ತಲೆ ಎತ್ತಿ ಅಡಿಕೆ ಕೊನೆ ಎಷ್ಟಿದೆ ಎಂದು ನೋಡುತ್ತಿರಲಿಲ್ಲ, ಅಡಿಕೆ ಮರದ ಬುಡ ನೋಡುತ್ತಿದ್ದರು ವೆನಿಲ್ಲ ಬಳ್ಳಿ ಹೇಗಿದೆ ಎಂದು!!, ಆಗ ಹಸಿರು ಬಂಗಾರ ಎಂದು ಕರೆಸಿಕೊಂಡ ವೆನಿಲ್ಲ ಈಗ ಬೆಲೆ ಕಳೆದುಕೊಂಡು ಏನಿಲ್ಲ ಎಂದು ಕರೆಸಿಕೊಳ್ಳುವ ಹಂತಕ್ಕೆ ಬಂದಿದೆ...

ಇಲ್ಲಿಯವರೆಗೆ ತಮಾಷೆ ಆಯಿತು ವಾಸ್ತವಕ್ಕೆ ಬಂದರೆ...........

ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆಯಿಲ್ಲದೆ ರೈತ ಸೊರಗಿ ಹೋಗುತ್ತಿದ್ದಾನೆ..ಯಾಕೆ ಹೀಗಾಗುತ್ತಿದೆ ಎಂದು ಚರ್ಚೆ ಆಗಬೇಕಾಗಿದೆ, ರೈತರಿಗೆ ಸರಿಯಾದ ಮಾಹಿತಿ ದೊರಕುವಂತಾಗಬೇಕು, ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಲಿ ಎನ್ನುವ ಆಶಯ ಒಂದನ್ನೇ ವ್ಯಕ್ತಪಡಿಸಲು ಸಾದ್ಯವಾಗುತ್ತಿದೆ ಕ್ಷಮೆ ಇರಲಿ..

Friday, March 28, 2008

ಮನದನ್ನೆಗೆ ಮೊದಲ ಪತ್ರ

ನನ್ನ ಪ್ರೀತಿಯ ................. ಗೆ
ಅಂದು ನಿನ್ನ ನೋಡಲು ಬಂದಾಗ ನಿನ್ನ ಆ ನಗು ಮೊಗದ ಕೆನ್ನೆಯ ಗುಳಿಗೆ ಮರುಳಾಗಿದ್ದೆ,
ನಿನ್ನ ಕಣ್ಣ ಕಾಂತಿಯಲಿ ಮಿಂಚೊಂದ ಕಂಡಿದ್ದೆ,
ನನ್ನ ಹೃದಯದ ಬಡಿತ ಹೆಚ್ಚಾಗಿ ಅಂದು ಎಚ್ಚರ ತಪ್ಪಿದ್ದೆ,
ನಂತರ ನಿನ್ನ ಒಪ್ಪಿಗೆಯ ತಿಳಿದು ಮಕ್ಕಳಂತೆ ಕುಣಿದಾಡಿದ್ದೆ "ನೀನೆ ನನ್ನ ಅರ್ಧಾಂಗಿ ಎಂದು".
ನಿನ್ನ ಪ್ರೀತಿಯ ಪತ್ರಕ್ಕಾಗಿ ಕಾಯುತಿರುವೆ,
ಹಾಂ ಪ್ರಿಯೇ ಹೇಳಲು ಮರೆತಿದ್ದೆ
ಪತ್ರದ ಜೊತೆ ಸಿಹಿ ಮುತ್ತೊಂದ ಕಳಿಸಿರುವೆ ಒಪ್ಪಿಸಿಕೋ.......


ಇಂತಿ ನಿನ್ನವನು...

Wednesday, March 26, 2008

ಭಾವನೆಗಳ ಸಂಘರ್ಷ

ಇದೇನು ಭಾವನೆಗಳ ಅಲೆಯೋ
ಅಥವಾ ಅನುಭಂದದ ಹೊಳೆಯೋ
ಮಧುರ ನೆನಪುಗಳ ಮಳೆಯೋ
ಈ ಪುಟ್ಟ ಮೆದುಳಿನಲಿ ಏನಾಗುತಿದೆ
ಎಂದು ತಿಳಿಯದೆ ಒದ್ದಾಡುತಿರುವೆ
ಭಾವನೆಗಳ ಸಂಘರ್ಷಣೆಯಲ್ಲಿ.