ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, April 4, 2008

ಭಾವ "ಜೀವಿ"

ಅಕ್ಕನಿಗೆ ಮದುವೆ ಆಗಿ ಸ್ವಲ್ಪ ಸಮಯವಾಗಿತ್ತು..
ಭಾವನ ಬಗ್ಗೆ ತಿಳಿದುಕೊಳ್ಳೋಣ ಎಂದು ಫೋನ್ ಮಾಡಿ ಕೇಳಿದೆ "ಅಕ್ಕ ಭಾವ ಹೇಗೆ" ಎಂದು?
ಯಾವಾಗಲು ಚುಟುಕಾಗಿ ಉತ್ತರಿಸುವ ಅಕ್ಕ ಹೇಳಿದಳು ಭಾವ "ಜೀವಿ" ಎಂದು!
ನಾನು ತಬ್ಬಿಬ್ಬು.. ಭಾವ ಜೀವಿಯೇ?
ಅಕ್ಕ ಏಕೆ ಭಾವನಿಗೆ ಜೀವಿ ಎಂದಳು ಎಂದು?!
ನಂತರ ತಿಳಿಯಿತು ಭಾವನೆಯ ಲೋಕದಲ್ಲಿಯೇ ಇರುವ ಮನುಷ್ಯರನ್ನು
ಭಾವ ಜೀವಿಗಳೆಂದು ಕರೆಯುತ್ತಾರೆ ಎಂದು!
ಆದರೂ ಜೀವಿ ಎಂದರೆ ಪ್ರಾಣಿ
ಎಂದಾಯಿತಲ್ಲವೇ ಎಂದು ಯೋಚಿಸುತ್ತಿದ್ದೇನೆ!
ನಿಮಗೇನಾದರೂ ಗೊತ್ತೆ ಭಾವ ಜೀವಿ ಅನ್ನುವ ಪಧ ಹೇಗೆ ಬಂತು ಎಂದು?

Tuesday, April 1, 2008

ಆಗ ವೆನಿಲ್ಲ ಈಗ ಏನಿಲ್ಲ !

ರೆಡು ವರ್ಷದ ಹಿಂದೆ ವೆನಿಲಕ್ಕೆ ಬಂಗಾರದ ಬೆಲೆ ಬಂದಿತ್ತು ಆಗ ಮದುವೆ ಮುಂಜಿಯಲ್ಲಿ ಜನರು ಮಾತನಾಡುತ್ತಿದ್ದ ವಿಷಯ ವೆನಿಲ ವೆನಿಲ...ಕೇಳುತ್ತಿದ್ದರು "ನಿಮ್ಮ ಮನೆಯಲ್ಲಿ ಎಷ್ಟು ವೆನಿಲ್ಲ ಬಳ್ಳಿ ಇದೆ ಎಂದು". ಬಳ್ಳಿ ಹಾಕಿಲ್ಲ ಎಂದು ಯಾರಾದರು ಹೇಳಿದರೆ ಇವನು ಏನು ತಿಳಿಯದ ದಡ್ಡ ಎನ್ನುವಂತೆ ನೋಡುತ್ತಿದ್ದರು ಆಗ!. ತೋಟಕ್ಕೆ ಹೋದರೆ ತಲೆ ಎತ್ತಿ ಅಡಿಕೆ ಕೊನೆ ಎಷ್ಟಿದೆ ಎಂದು ನೋಡುತ್ತಿರಲಿಲ್ಲ, ಅಡಿಕೆ ಮರದ ಬುಡ ನೋಡುತ್ತಿದ್ದರು ವೆನಿಲ್ಲ ಬಳ್ಳಿ ಹೇಗಿದೆ ಎಂದು!!, ಆಗ ಹಸಿರು ಬಂಗಾರ ಎಂದು ಕರೆಸಿಕೊಂಡ ವೆನಿಲ್ಲ ಈಗ ಬೆಲೆ ಕಳೆದುಕೊಂಡು ಏನಿಲ್ಲ ಎಂದು ಕರೆಸಿಕೊಳ್ಳುವ ಹಂತಕ್ಕೆ ಬಂದಿದೆ...

ಇಲ್ಲಿಯವರೆಗೆ ತಮಾಷೆ ಆಯಿತು ವಾಸ್ತವಕ್ಕೆ ಬಂದರೆ...........

ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆಯಿಲ್ಲದೆ ರೈತ ಸೊರಗಿ ಹೋಗುತ್ತಿದ್ದಾನೆ..ಯಾಕೆ ಹೀಗಾಗುತ್ತಿದೆ ಎಂದು ಚರ್ಚೆ ಆಗಬೇಕಾಗಿದೆ, ರೈತರಿಗೆ ಸರಿಯಾದ ಮಾಹಿತಿ ದೊರಕುವಂತಾಗಬೇಕು, ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಲಿ ಎನ್ನುವ ಆಶಯ ಒಂದನ್ನೇ ವ್ಯಕ್ತಪಡಿಸಲು ಸಾದ್ಯವಾಗುತ್ತಿದೆ ಕ್ಷಮೆ ಇರಲಿ..