ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, August 28, 2008

ಮನಸಿಗೊಂದು ಬುದ್ದಿ ಮಾತು !!

ಅತಿಯಾಗಿ ನೀ ಎಲ್ಲರ ಹಚ್ಚಿಕೊಳ್ಳುವೆ ಏಕೆ?

ಮಿತಿ ಮೀರಿ ಮಾತಾಡುವೆ ಏಕೆ? ಅತಿ ಸುಕ್ಷ್ಮಿ ನೀ ಯಾಕಾದೆ?

ಮತ್ತೊಬ್ಬರ ಮಾತನು ನೀ ಯಾಕೆ ಅಪಾರ್ಥ ಮಾಡಿಕೊಳ್ಳುವೆ ?!

ನೀನೇಕೆ ದುಡುಕಿ ಮಾತಾಡಿ ನೋವ ನೀಡಿ ನೋವ ಏಕೆ ತಿನ್ನುವೆ ?!

ಓ ಮನಸೇ ನಿನ್ನ ಯೋಚನೆಯ ಲಹರಿಯ ಬದಲಾಯಿಸಿ ನೋಡು..


ನೀ ಕೊಂಚ ತಾಳ್ಮೆಯ ತಂದು ಕೊಂಡು

ನೋಡುವ ಭಾವನೆಯ ಬದಲಿಸಿ ನೋಡು...

ಜಗವೇ ಸುಂದರ ಎನಿಸದಿರದು....

ಮಾತಿನಲಿ ಜೇನ ಸಿಹಿ ಪಡೆವೆ

ನೋಟದಲಿ ಮೆಚ್ಚುಗೆಯ ಪಡೆವೆ

ಬಾಳೊಂದು ಸುಂದರ ಕಾವ್ಯ ಎನಿಸುವುದು .