ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, June 20, 2008

ಮನಸೊಂದು ಮಾಯಾವಿ ಕುದುರೆ

ಮನಸೆಂಬ ಮಾಯಾವಿ ಕುದುರೆಗೆ
ಇಲ್ಲ ಲಂಗು ಲಗಾಮು

ಓಡುತಲಿರೆ ಮನೋವೆಗದಿ
ಅದಕಿಲ್ಲ ಕಲ್ಲು ಮುಳ್ಳಿನ ಪರಿವೆ

ಭಾವ ಭೃಂದಾವನದಿ ಕೆನೆಯುತಿರೆ
ಉಕ್ಕಿ ಹರಿಯುತಿದೆ ಭಾವೋದ್ವೇಗ

ನವ ಭಾವ ನವ ರಾಗ
ನವ ಯಾನಕಿಲ್ಲ ಕೊನೆ

ಸರಿ ತಪ್ಪುಗಳ ನಡುವಿನ ಕವಲಿನಲಿ ದಾರಿ ಕಾಣದೆ
ನಾಗಾಲೋಟಕೆ ಬಿದ್ದಿದೆ ಕೆಲ ಕ್ಷಣ ಕಡಿವಾಣ


ಮತ್ತದೇ ಕಲ್ಪನೆಯ ನೀಲಿ ಕುದುರೆಯ ಬೆನ್ನಟ್ಟಿ ಹೊರಟಿದೆ
ಮನವೆಂಬ ಬಿಳಿ ಕಪ್ಪು ಕುದುರೆ

2 comments:

ತೇಜಸ್ವಿನಿ ಹೆಗಡೆ said...

ಮನಸ್ವಿ ಅವರೆ,

ಕವನ ಇಷ್ಟವಾಯಿತು. ಮನಸ್ಸೆಂಬ ಕುದುರೆಯನ್ನು ಕವನದ ಮೂಲಕ ಕಟ್ಟಿಹಾಕುವ ಯತ್ನ ಚೆನ್ನಾಗಿದೆ. ಆದರೆ ಕವನದಲ್ಲೊಂದು ಚಿಕ್ಕ ತಪ್ಪಾಗಿದೆ.(Typing error)"ಭೃಂದಾವನದಿ" ಎಂಬಲ್ಲಿ "ಬೃಂದಾವನ" ಆಗಬೇಕಾಗಿದೆ.

ಮನಸ್ವಿ said...

ತೇಜಸ್ವಿನಿ ಹೆಗಡೆಯವರೇ ದನ್ಯವಾದಗಳು
ಹೀಗೆ ಬರುತ್ತಿರಿ..

-ಮನಸ್ವಿ