ಇದು ಹಲವು ಟಿ.ವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಸಂಗೀತ ಕಾರ್ಯಕ್ರಮದ ಸ್ಪರ್ಧಿಗಳು "ನಾನು ನೆಕ್ಷ್ಟ್ ರೌಂಡಿಗೆ ಇನ್ ಆಗಬೇಕು ಅಂದರೆ ಪ್ಲೀಸ್ ಪ್ಲೀಸ್ ನಂಗೆ ಎಸ್.ಎಂ.ಎಸ್ ಮೂಲಕ ವೋಟು ಮಾಡಿ" ನನ್ನ ವೋಟಿಂಗ್ ಫಾರ್ಮ್ಯಾಟ್ ಬಂದ್ಬಿಟ್ಟು MO ಅಂತ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು 220 ಟೈಪ್ ಮಾಡಿ 42003150
(420 ಕಂಪನಿ, ೩ರುಪಾಯಿ ಹೋಗತ್ತೆ ಅರ್ದ ಮೊಬೈಲ್ ಕಂಪನಿಗೆ ಇನ್ನು ಅರ್ದ ಟಿ.ವಿ. ಚಾನೆಲ್ ಗೆ ಅಂತಿಟ್ಟುಕೊಳ್ಳಿ! ಅನ್ತಿರಬಹುದು! ) ಇಷ್ಟೆಲ್ಲಾ ಕೊರೆತ ಯಾಕೆ ಅಂತೀರ ಈಗ ನೇರವಾಗಿ ವಿಚಾರಕ್ಕೆ ಬರ್ತೀನಿ.....
ಸಂಗೀತ ಕಾರ್ಯಕ್ರಮದ ನೆಪದಲ್ಲಿ ಟಿ.ವಿ. ಚಾನೆಲ್ ಗಳು ದುಡ್ಡು ಮಾಡಲು ಹೊರಟಿವೆ, ಇದಾದರು ಹೋಗಲಿ ಬಿಡಿ ಎನ್ನಬಹುದು ಆದರೆ ಪುಟ್ಟ ಮಕ್ಕಳಿಗಾಗಿ ಕೆಲವು ಟಿ.ವಿ. ಚಾನೆಲ್ ಗಳು ಸಂಗೀತ ಸ್ಪರ್ದೆಗಳನ್ನು ನಡೆಸುತ್ತಿವೆ, ಆ ಮಕ್ಕಳನ್ನು ಕೂಡ ಎಸ್.ಎಂ.ಎಸ್ ಬಿಕ್ಷೆ ಎತ್ತುವಂತೆ ಮಾಡುತ್ತಿವೆ, ಆ ಕಂದಮ್ಮಗಳ ಮನಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸ್ವಲ್ಪವಾದರೂ ಚಿಂತೆ ಇದೆಯಾ .. ಚನ್ನಾಗಿ ಹಾಡುವವರು ಕೂಡ ಎಸ್.ಎಂ.ಎಸ್ ಬರಲಿಲ್ಲ ಅನ್ನುವ ಕಾರಣಕ್ಕೆ ಸ್ಪರ್ದೆಯಿಂದ ಹೊರಹೊಗಬೇಕಾದರೆ ಒಂದು ಪ್ರತಿಬೆಯನ್ನು ಬಾಲ್ಯದಲ್ಲೇ ಚಿವುಟಿ ಹಾಕಿದಂತೆ ಅಲ್ಲವೇ?... ಬರೀ ಎಸ್.ಎಂ.ಎಸ್ ಮೂಲಕವೇ ಸ್ಪರ್ಧಿಗಳ ಪಲಿತಾಂಶ ನಿಗದಿ ಆಗುವುದಾದರೆ 3 ರಿಂದ 4 ಜನರು ತೀರ್ಪುಗಾರರು ಏಕೆ? ಚನ್ನಗಿಯೇನೋ ಹಾಡಿದ್ದಿರಿ ಆದರೆ ವೋಟು ಬರಲಿಲ್ಲ ಅಂತ ಹೇಳಲು ತೀರ್ಪುಗಾರು ಬೇಕೇ?
ಕೊನೆಯ ಮಾತು ಇಷ್ಟಕ್ಕೂ ಎಸ್.ಎಂ.ಎಸ್ ವೋಟಿಂಗ್ ಸಿಸ್ಟಂ ಪಾರಧರ್ಶಕವಾಗಿದೆಯೇ? ಅನ್ನುವ ಪ್ರಶ್ನೆ?
Tuesday, May 20, 2008
Saturday, May 17, 2008
ರೋಗಿ ಫಲ !
ನನಗೆ ಇಷ್ಟವಿಲ್ಲದ ಒಂದು ಹಣ್ಣಿಗೆ ರೋಗಿ ಫಲ ಎಂದು ನಾಮಕರಣ ಮಾಡಿದ್ದೇನೆ,ಈ ಹೆಸರೇ ಸೂಕ್ತ ಅನಿಸಿದ್ದು ಏಕೆಂದರೆ ಆಸ್ಪತ್ರೆಯಲ್ಲಿರುವವರನ್ನು ನೋಡಲು ಹೋದರೆ ಹೆಚ್ಚಾಗಿ ಈ ಹಣ್ಣನ್ನೇ ತೆಗೆದುಕೊಡು ಹೋಗುತ್ತಾರೆ, ವೃದ್ಧರು ಹುಶಾರಿಲ್ಲದವರನ್ನು ನೋಡಲು ಹೋಗುವುದಾದರೆ ಹೆಚ್ಚಾಗಿ ಇದೇ ಹಣ್ಣನ್ನೇ ಕೊಳ್ಳುತ್ತಾರೆ, ಈ ಹಣ್ಣನ್ನು ನೋಡಿದ ತಕ್ಷಣ ನಾನು ಮುಖ ಹಿಂಡುತ್ತೇನೆ, ಆದರೆ ಈ ರೋಗಿ ಫಲ ಹಿಂಡಿ ಮಾಡಿದ ಪಾನಕ ರೋಗಿಗಳಿಗೆ ಒಳ್ಳೆಯದಂತೆ! (ರೋಗಿಯು ಮುಖ ಹಿಂಡಿಕೊಂಡು ಕುಡಿಯುವುದನ್ನು ಕಲ್ಪಿಸಿಕೊಳ್ಳಿ! ). ಈ ರೋಗಿ ಫಲಕ್ಕಿಂತ ಕಿತ್ತಳೆ ಹಣ್ಣನ್ನಾದರೂ ತಿನ್ನಬಹುದು.
ಮನೆಯಲ್ಲಿ ಯಾರನ್ನೋ ನೋಡಲು ಹೋಗಬೇಕು ಏನಾದರೂ ಹಣ್ಣನ್ನು ತೆಗುದುಕೊಂಡು ಬಾ ಎಂದು ಹೇಳಿದ್ದರು, ನಾನು ಆಸ್ಪತ್ರೆಯ ಎದುರಿಗೆ ಇರುವ ಹಣ್ಣಿನ ಅಂಗಡಿಯವನ ಹತ್ತಿರ "ರೋಗಿ ಫಲ" ಕೊಡಿ ಎಂದು ಹೇಳಿದೆ ಅದಕ್ಕೆ ಅವನು ಎಷ್ಟು ಕೇ.ಜಿ ಬೇಕು ಎಂದು ಕೇಳಿದಾಗ...(ತಟ್ಟನೆ ನಾನು ಏನು ಕೇಳಿದ್ದೆ ಎಂದು ನೆನಪಿಸಿಕೊಂಡು!) ನಾನು ಏನು ಕೇಳಿದ್ದು ಎಂದು ಅಂಗಡಿಯವನನ್ನು ಕೇಳಿದಾಗ ಮುಸುಂಬಿ ಬೇಕು ಎಂದಿರಲ್ಲ ಎಷ್ಟು ಕೊಡಲಿ ಕೇಳಿದ!
ಈಗ ಹೇಳಿ ನೀವು ದಾರಾಳವಾಗಿ ಮುಸಂಬಿಯನ್ನು ರೋಗಿ ಫಲ ಎಂದು ಕರೆಯಬಹುದಲ್ಲವೇ !
ಮನೆಯಲ್ಲಿ ಯಾರನ್ನೋ ನೋಡಲು ಹೋಗಬೇಕು ಏನಾದರೂ ಹಣ್ಣನ್ನು ತೆಗುದುಕೊಂಡು ಬಾ ಎಂದು ಹೇಳಿದ್ದರು, ನಾನು ಆಸ್ಪತ್ರೆಯ ಎದುರಿಗೆ ಇರುವ ಹಣ್ಣಿನ ಅಂಗಡಿಯವನ ಹತ್ತಿರ "ರೋಗಿ ಫಲ" ಕೊಡಿ ಎಂದು ಹೇಳಿದೆ ಅದಕ್ಕೆ ಅವನು ಎಷ್ಟು ಕೇ.ಜಿ ಬೇಕು ಎಂದು ಕೇಳಿದಾಗ...(ತಟ್ಟನೆ ನಾನು ಏನು ಕೇಳಿದ್ದೆ ಎಂದು ನೆನಪಿಸಿಕೊಂಡು!) ನಾನು ಏನು ಕೇಳಿದ್ದು ಎಂದು ಅಂಗಡಿಯವನನ್ನು ಕೇಳಿದಾಗ ಮುಸುಂಬಿ ಬೇಕು ಎಂದಿರಲ್ಲ ಎಷ್ಟು ಕೊಡಲಿ ಕೇಳಿದ!
ಈಗ ಹೇಳಿ ನೀವು ದಾರಾಳವಾಗಿ ಮುಸಂಬಿಯನ್ನು ರೋಗಿ ಫಲ ಎಂದು ಕರೆಯಬಹುದಲ್ಲವೇ !
Thursday, May 15, 2008
ಪ್ರೀತಿ ನೀ ಬರಬಾರದೆ ನನ್ನ ಕಾಣಲು..
ಓ ಪ್ರೀತಿ ಕೊಲ್ಲದಿರು ನನ್ನನು
ನನ್ನೇಕೆ ಕಾಡುತಿರುವೆ ಈ ಪರಿ,
ನಿನ್ನ ಮೌನ ಅರ್ಥವಾಗದಾಗಿದೆ......
ಮಾತಾಡ ಭಾರದೇ....... ಸಾಕು ಈ ಮೌನ, ಮುರಿಯಬಾರದೇ.....
ಮೊಗದಲಿ ನಗುವ ತರಲಾರೆಯೇ.....
ನಿನ್ನ ಕಣ್ಣಂಚಿನ ಮಿಂಚ ಕಾಣುವಾಸೆ....
ಕಣ್ಣ ಮುಂದೆ ಬರಲಾರೆಯೇ...
ಸಾಕಿನ್ನು ನಿನ್ನ ಹುಸಿ ಕೋಪ ಬಾ ಬೇಗ
ನಿನ್ನ ಕಾಣದೆ ನಾ ಹೇಗೆ ಬದುಕಲಿ.
ನನ್ನೇಕೆ ಕಾಡುತಿರುವೆ ಈ ಪರಿ,
ನಿನ್ನ ಮೌನ ಅರ್ಥವಾಗದಾಗಿದೆ......
ಮಾತಾಡ ಭಾರದೇ....... ಸಾಕು ಈ ಮೌನ, ಮುರಿಯಬಾರದೇ.....
ಮೊಗದಲಿ ನಗುವ ತರಲಾರೆಯೇ.....
ನಿನ್ನ ಕಣ್ಣಂಚಿನ ಮಿಂಚ ಕಾಣುವಾಸೆ....
ಕಣ್ಣ ಮುಂದೆ ಬರಲಾರೆಯೇ...
ಸಾಕಿನ್ನು ನಿನ್ನ ಹುಸಿ ಕೋಪ ಬಾ ಬೇಗ
ನಿನ್ನ ಕಾಣದೆ ನಾ ಹೇಗೆ ಬದುಕಲಿ.
Friday, May 9, 2008
ಬಾಲ್ಯದಾ ನೆನಪಿಗಾಗಿ
ಮಣ್ಣಟವಾಡಿದಾ ನೆನಪು
ಜಗಳವಾಡಿ ಮರುಕ್ಷಣವೇ ಒಂದಾದ ನೆನಪು
ಹುಸಿ ಮುನಿಸ ತೋರಿದ ನೆನಪು
ಜಾತ್ರೆಯಲಿ ಬಲೂನ್ ಕೊಂಡ ನೆನಪು...
ಹಾಗೆ ಈ ಫೋಟೋ ತೆಗೆಸಿಕೊಂಡ ನೆನಪು !
Wednesday, May 7, 2008
ಬಿಡುಗಡೆಯ ಬಂಧ
ಬದುಕಿನ ಜಂಜಾಟಗಳ ತೊರೆದು
ಬಂಧನಗಳ ಬೇಡಿ ತೆರೆದು
ಭಾವನೆಗಳ ಭಾವ ಕರಗಿ
ಕಲ್ಪನೆಗಳ ಪರದೆ ಸರಿದು
ಬಯಕೆಯ ಬೆಂಕಿ ಆರಿದಾಗ
ಜೀವನದ ಬಿಡುಗಡೆಯ ಬಂಧವಾ!?
ಬಂಧನಗಳ ಬೇಡಿ ತೆರೆದು
ಭಾವನೆಗಳ ಭಾವ ಕರಗಿ
ಕಲ್ಪನೆಗಳ ಪರದೆ ಸರಿದು
ಬಯಕೆಯ ಬೆಂಕಿ ಆರಿದಾಗ
ಜೀವನದ ಬಿಡುಗಡೆಯ ಬಂಧವಾ!?
Tuesday, May 6, 2008
ಒದ್ದಾಟ
ಬಯಕೆಯ ಬೆಂಕಿಯಲ್ಲಿ
ಮೋಹದ ಬಲೆಯಲ್ಲಿ
ಪ್ರೇಮದ ಗುಂಗಿನಲ್ಲಿ
ಕಲ್ಪನೆಗಳ ಕಂಪಲ್ಲಿ
ಭಾವನೆಗಳ ಸಾಗರದಲ್ಲಿ
ಮಾತಿನ ಮತ್ತಲ್ಲಿ
ಮೌನದ ಮುಸುಕಿನಲಿ ಸಿಕ್ಕಿ ಒದ್ದಾಡುತಿರುವೆ.
Subscribe to:
Posts (Atom)
