ನನಗೆ ಇಷ್ಟವಿಲ್ಲದ ಒಂದು ಹಣ್ಣಿಗೆ ರೋಗಿ ಫಲ ಎಂದು ನಾಮಕರಣ ಮಾಡಿದ್ದೇನೆ,ಈ ಹೆಸರೇ ಸೂಕ್ತ ಅನಿಸಿದ್ದು ಏಕೆಂದರೆ ಆಸ್ಪತ್ರೆಯಲ್ಲಿರುವವರನ್ನು ನೋಡಲು ಹೋದರೆ ಹೆಚ್ಚಾಗಿ ಈ ಹಣ್ಣನ್ನೇ ತೆಗೆದುಕೊಡು ಹೋಗುತ್ತಾರೆ, ವೃದ್ಧರು ಹುಶಾರಿಲ್ಲದವರನ್ನು ನೋಡಲು ಹೋಗುವುದಾದರೆ ಹೆಚ್ಚಾಗಿ ಇದೇ ಹಣ್ಣನ್ನೇ ಕೊಳ್ಳುತ್ತಾರೆ, ಈ ಹಣ್ಣನ್ನು ನೋಡಿದ ತಕ್ಷಣ ನಾನು ಮುಖ ಹಿಂಡುತ್ತೇನೆ, ಆದರೆ ಈ ರೋಗಿ ಫಲ ಹಿಂಡಿ ಮಾಡಿದ ಪಾನಕ ರೋಗಿಗಳಿಗೆ ಒಳ್ಳೆಯದಂತೆ! (ರೋಗಿಯು ಮುಖ ಹಿಂಡಿಕೊಂಡು ಕುಡಿಯುವುದನ್ನು ಕಲ್ಪಿಸಿಕೊಳ್ಳಿ! ). ಈ ರೋಗಿ ಫಲಕ್ಕಿಂತ ಕಿತ್ತಳೆ ಹಣ್ಣನ್ನಾದರೂ ತಿನ್ನಬಹುದು.
ಮನೆಯಲ್ಲಿ ಯಾರನ್ನೋ ನೋಡಲು ಹೋಗಬೇಕು ಏನಾದರೂ ಹಣ್ಣನ್ನು ತೆಗುದುಕೊಂಡು ಬಾ ಎಂದು ಹೇಳಿದ್ದರು, ನಾನು ಆಸ್ಪತ್ರೆಯ ಎದುರಿಗೆ ಇರುವ ಹಣ್ಣಿನ ಅಂಗಡಿಯವನ ಹತ್ತಿರ "ರೋಗಿ ಫಲ" ಕೊಡಿ ಎಂದು ಹೇಳಿದೆ ಅದಕ್ಕೆ ಅವನು ಎಷ್ಟು ಕೇ.ಜಿ ಬೇಕು ಎಂದು ಕೇಳಿದಾಗ...(ತಟ್ಟನೆ ನಾನು ಏನು ಕೇಳಿದ್ದೆ ಎಂದು ನೆನಪಿಸಿಕೊಂಡು!) ನಾನು ಏನು ಕೇಳಿದ್ದು ಎಂದು ಅಂಗಡಿಯವನನ್ನು ಕೇಳಿದಾಗ ಮುಸುಂಬಿ ಬೇಕು ಎಂದಿರಲ್ಲ ಎಷ್ಟು ಕೊಡಲಿ ಕೇಳಿದ!
ಈಗ ಹೇಳಿ ನೀವು ದಾರಾಳವಾಗಿ ಮುಸಂಬಿಯನ್ನು ರೋಗಿ ಫಲ ಎಂದು ಕರೆಯಬಹುದಲ್ಲವೇ !
Saturday, May 17, 2008
Thursday, May 15, 2008
ಪ್ರೀತಿ ನೀ ಬರಬಾರದೆ ನನ್ನ ಕಾಣಲು..
ಓ ಪ್ರೀತಿ ಕೊಲ್ಲದಿರು ನನ್ನನು
ನನ್ನೇಕೆ ಕಾಡುತಿರುವೆ ಈ ಪರಿ,
ನಿನ್ನ ಮೌನ ಅರ್ಥವಾಗದಾಗಿದೆ......
ಮಾತಾಡ ಭಾರದೇ....... ಸಾಕು ಈ ಮೌನ, ಮುರಿಯಬಾರದೇ.....
ಮೊಗದಲಿ ನಗುವ ತರಲಾರೆಯೇ.....
ನಿನ್ನ ಕಣ್ಣಂಚಿನ ಮಿಂಚ ಕಾಣುವಾಸೆ....
ಕಣ್ಣ ಮುಂದೆ ಬರಲಾರೆಯೇ...
ಸಾಕಿನ್ನು ನಿನ್ನ ಹುಸಿ ಕೋಪ ಬಾ ಬೇಗ
ನಿನ್ನ ಕಾಣದೆ ನಾ ಹೇಗೆ ಬದುಕಲಿ.
ನನ್ನೇಕೆ ಕಾಡುತಿರುವೆ ಈ ಪರಿ,
ನಿನ್ನ ಮೌನ ಅರ್ಥವಾಗದಾಗಿದೆ......
ಮಾತಾಡ ಭಾರದೇ....... ಸಾಕು ಈ ಮೌನ, ಮುರಿಯಬಾರದೇ.....
ಮೊಗದಲಿ ನಗುವ ತರಲಾರೆಯೇ.....
ನಿನ್ನ ಕಣ್ಣಂಚಿನ ಮಿಂಚ ಕಾಣುವಾಸೆ....
ಕಣ್ಣ ಮುಂದೆ ಬರಲಾರೆಯೇ...
ಸಾಕಿನ್ನು ನಿನ್ನ ಹುಸಿ ಕೋಪ ಬಾ ಬೇಗ
ನಿನ್ನ ಕಾಣದೆ ನಾ ಹೇಗೆ ಬದುಕಲಿ.
Friday, May 9, 2008
ಬಾಲ್ಯದಾ ನೆನಪಿಗಾಗಿ
ಮಣ್ಣಟವಾಡಿದಾ ನೆನಪು
ಜಗಳವಾಡಿ ಮರುಕ್ಷಣವೇ ಒಂದಾದ ನೆನಪು
ಹುಸಿ ಮುನಿಸ ತೋರಿದ ನೆನಪು
ಜಾತ್ರೆಯಲಿ ಬಲೂನ್ ಕೊಂಡ ನೆನಪು...
ಹಾಗೆ ಈ ಫೋಟೋ ತೆಗೆಸಿಕೊಂಡ ನೆನಪು !
Wednesday, May 7, 2008
ಬಿಡುಗಡೆಯ ಬಂಧ
ಬದುಕಿನ ಜಂಜಾಟಗಳ ತೊರೆದು
ಬಂಧನಗಳ ಬೇಡಿ ತೆರೆದು
ಭಾವನೆಗಳ ಭಾವ ಕರಗಿ
ಕಲ್ಪನೆಗಳ ಪರದೆ ಸರಿದು
ಬಯಕೆಯ ಬೆಂಕಿ ಆರಿದಾಗ
ಜೀವನದ ಬಿಡುಗಡೆಯ ಬಂಧವಾ!?
ಬಂಧನಗಳ ಬೇಡಿ ತೆರೆದು
ಭಾವನೆಗಳ ಭಾವ ಕರಗಿ
ಕಲ್ಪನೆಗಳ ಪರದೆ ಸರಿದು
ಬಯಕೆಯ ಬೆಂಕಿ ಆರಿದಾಗ
ಜೀವನದ ಬಿಡುಗಡೆಯ ಬಂಧವಾ!?
Tuesday, May 6, 2008
ಒದ್ದಾಟ
ಬಯಕೆಯ ಬೆಂಕಿಯಲ್ಲಿ
ಮೋಹದ ಬಲೆಯಲ್ಲಿ
ಪ್ರೇಮದ ಗುಂಗಿನಲ್ಲಿ
ಕಲ್ಪನೆಗಳ ಕಂಪಲ್ಲಿ
ಭಾವನೆಗಳ ಸಾಗರದಲ್ಲಿ
ಮಾತಿನ ಮತ್ತಲ್ಲಿ
ಮೌನದ ಮುಸುಕಿನಲಿ ಸಿಕ್ಕಿ ಒದ್ದಾಡುತಿರುವೆ.
Friday, April 25, 2008
ವಾತಾವರಣ
ಇಳಿ ಬಿಸಿಲ ಹೊತ್ತಿನಲಿ
ಕಾರ್ಮೋಡ ಕವಿದು
ತಂಗಾಳಿಯ ಅಲೆಯೆದ್ದು
ಮಿಂಚು ಮಿಂಚಿ ಮರೆಯಾಗಿ
ಗುಡುಗಿನ ಸದ್ದಡಗಿ
ಮೋಡ ಕರಗಿ
ಹನಿ ಹನಿ ಮಳೆ ಸುರಿದು
ಭೂಮಿ ತಾಯ ಮಡಿಲ ಸೇರಿ
ಆವಿಯ ಉಗಿಯೆದ್ದು
ಮಣ್ಣಿನ ಘಮವು ಪಸರಿಸಿ
ತಂಪಾಯಿತು ವಾತಾವರಣ .
ಕಾರ್ಮೋಡ ಕವಿದು
ತಂಗಾಳಿಯ ಅಲೆಯೆದ್ದು
ಮಿಂಚು ಮಿಂಚಿ ಮರೆಯಾಗಿ
ಗುಡುಗಿನ ಸದ್ದಡಗಿ
ಮೋಡ ಕರಗಿ
ಹನಿ ಹನಿ ಮಳೆ ಸುರಿದು
ಭೂಮಿ ತಾಯ ಮಡಿಲ ಸೇರಿ
ಆವಿಯ ಉಗಿಯೆದ್ದು
ಮಣ್ಣಿನ ಘಮವು ಪಸರಿಸಿ
ತಂಪಾಯಿತು ವಾತಾವರಣ .
Subscribe to:
Posts (Atom)
