ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, September 5, 2008

Bsnl ಮೆಗಾ ಮತ್ತು ಸುಪ್ರೀಮು ! ಹಾಗು ಒಂದಿದ್ದರೆ ಒಂದಿಲ್ಲ ಸೇವೆ ನೀಡುವ ಮೊಬೈಲ್ ಕಂಪೆನಿಗಳು

ನಮ್ಮ ದೇಶದ ಅತಿದೊಡ್ಡ ಸೇವಾ ಜಾಲ ಎಂದು ಹೆಗ್ಗಳಿಕೆ ಪಡೆದ (ಬರಿ ದೊಡ್ಡ ಜಾಲ, ಸೇವೆಯ ಗುಣಮಟ್ಟದಲ್ಲಿ ಎಷ್ಟನೆಯ ಸ್ಥಾನವೋ?? ಗೊತ್ತಿಲ್ಲ!) ಬಿ.ಎಸ್.ಎನ್.ಎಲ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದೇ ಬಿಡುಗಡೆ ಮಾಡಲಾದ ಸ್ಟುಡೆಂಟ್ ಪ್ಲಾನ್ ಮೆಗಾ ಮತ್ತು ಸುಪ್ರೀಮ್... ಹೆಸರಿಗೆ ತಕ್ಕಂತೆ ಅಮೋಘ ಸ್ಕೀಮುಗಳು ಅನ್ನಿಸದೇ ಇರಲಾರದು!

ಮೊದಲು ಸುಪ್ರೀಂ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳೋಣ..
1) 30ಪೈಸೆಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ*
ಯಾವುದೇ ಜಾಹೀರಾತಿನ ಸಾಲಿನ ಜೊತೆ ಸ್ಟಾರ್ (*) ಅಥವಾ (#) ಚಿಕ್ಕ ಚಿನ್ನೆ ಇತ್ತೆಂದರೆ ನೀವು ಗಮನಿಸಬೇಕಾಗಿದ್ದು ಆ ಜಾಹಿರಾತಿನ ಪುಟದ ಕೆಳಕ್ಕೆ ಅಥವಾ ಇನ್ನೆಲ್ಲೋ ಚಿಕ್ಕದಾಗಿ ಬರೆದಿರುವ ಮಾಹಿತಿ (*ಯಾವುದೇ 5 ಬಿ.ಎಸ್.ಎನ್.ಎಲ್ ಕರ್ನಾಟಕದ ಮೊಬೈಲ್ ಗೆ )
2) 2000 ಉಚಿತ ಎಸ್.ಎಂ.ಎಸ್ ಪ್ರತಿ ತಿಂಗಳು
3) ಇತರ ಮೊಬೈಲ್ ಕರೆಗಳು ಕೇವಲ 49 ಪೈಸೆ ಪ್ರತಿ ನಿಮಿಷ
4) ಯಾವುದೇ ದೈನಿಕ ಬಾಡಿಗೆ ಇಲ್ಲ


ಆಕರ್ಷಕ ಯೋಜನೆ ಎಂದಿರಾ? ಸ್ವಲ್ಪ ತಡೆಯಿರಿ, ಇಲ್ಲಿಯವರೆಗೆ ಹೇಳಿದ್ದು ಮೇಲ್ನೋಟದ ಮಾಹಿತಿ.. ಇಲ್ಲಿ ನನಗೆ ಎದುರಾದ ಪ್ರಶ್ನೆ ಎಂದರೆ ಬಿ.ಎಸ್.ಎನ್.ಎಲ್ ನ ಪ್ರಕಾರ ಸುಪ್ರೀಂ ಪ್ಲ್ಯಾನ್ ಎಲ್ಲ ವಿದ್ಯಾರ್ಥಿಗಳಿಗಾಗಿ ಮಾಡಿದ್ದೋ ಅಥವಾ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾಡಿದ್ದೋ ಗೊತ್ತಾಗಲಿಲ್ಲ!!, ಈ ಪ್ಲ್ಯಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 112 ರೂಪಾಯಿಗಳ ರೀಚಾರ್ಜ್ ಮಾಡಿಸುವುದು ಕಡ್ಡಾಯ!! ಅದಕ್ಕೆ ದೊರೆಯುವ ಮಾತನಾಡುವ ಸಮಯ(Talk time) ಕೇವಲ 30 ರೂಪಾಯಿ!
ಅಂದರೆ ಮೂವತ್ತು ದಿನಕ್ಕೆ ಎಂಬತ್ತೆರೆದು ರುಪಾಯಿ ಶುಲ್ಕ ಕಟ್ಟಲೇ ಬೇಕಾದ್ದು ಅನಿವಾರ್ಯ! ಒಂದು ವೇಳೆ ತಿಂಗಳು ಮುಗಿಯುವುದರ ಒಳಗೆ 2000 ಎಸ್.ಎಂ.ಎಸ್ ಮುಗಿದು ಹೋದರೆ ಮುಂದಿನ ಎಲ್ಲ ಎಸ್.ಎಂ.ಎಸ್ ಗೆ ವಿದಿಸಲಾಗುವ ದರ 0.10/ಪ್ರತಿ ಸಂದೇಶಕ್ಕೆ (ಪ್ರತಿ ದಿನ ನೀವು ಸರಾ ಸರಿ 65 ಎಸ್.ಎಂ.ಎಸ್ ಕಳುಹಿಸಬಹುದು! ) ಅಂದರೆ ದಿನಕ್ಕೆ 65 ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ತಿಂಗಳು ಮುಗಿಯುವ ಮುನ್ನವೇ ನಿಮ್ಮ 2000 ಎಸ್.ಎಂ.ಎಸ್ ಸಂದೇಶಗಳು ಕಾಲಿಯಾದೀತು ಜೋಕೆ! )
ಇನ್ನು ಮೆಗಾ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ಹೇಳುವುದಾದರೆ ಇದು ಮತ್ತೊಂದು ರೀತಿ!
ಈ ಪ್ಲಾನ್ ನ ಸಿಂ ಕಾರ್ಡ್ ಗೆ ಕೇವಲ 249ರುಪಾಯಿ ಪಾವತಿಸಿದರೆ ಒಂದು ವರ್ಷ ವಾಯಿದೆ ದೊರೆಯುತ್ತದೆ. ಒಂದು ವರ್ಷ ವಾಯಿದೆ ಮುಗಿದ ನಂತರ ನೀವು ಸ್ಟುಡೆಂಟ್ ಸ್ಟುಡೆಂಟ್ ಆಗಿ ಉಳಿಯುವುದಿಲ್ಲ ?.. ಅಲ್ಲಲ್ಲ ನಿಮ್ಮ Mega ಸ್ಟುಡೆಂಟ್ ಸಿಂ ಸಾಮನ್ಯ ಪ್ರೀಪೈಡ್ ಆಗಿ ಬದಲಾಗಿರುತ್ತದೆ!)
2)ದೈನಿಕ ಬಾಡಿಗೆ ಕೇವಲ 1ರುಪಾಯಿ
3)2000 ಉಚಿತ ಎಸ್.ಎಂ.ಎಸ್
4)Delivery report ಆನ್ ಮಾಡಿಕೊಂಡರೆ ಅದಕ್ಕೂ 10 ಪೈಸೆ ಚಾರ್ಜ್ ಮಾಡಲಾಗುತ್ತದೆ.
ಬೇರೆಲ್ಲ ಮೊಬೈಲ್ ಕಂಪೆನಿಗಳ ಸ್ಟುಡೆಂಟ್ ಪ್ಲ್ಯಾನ್ ಗಳು ಹೆಚ್ಚಾಗಿ ತಿಂಗಳಿಗೆ 3000 ಉಚಿತ ಎಸ್.ಎಂ.ಎಸ್ ಒದಗಿಸುತ್ತಿದ್ದವು, ಈಗ ಬಿ.ಎಸ್.ಎನ್ .ಎಲ್ ನ ಚಾಣಕ್ಷ ತಲೆಯನ್ನು ನೋಡಿ ಇನ್ನೆಲ್ಲಾ ಕಂಪೆನಿಗಳು 1000 ಎಸ್.ಎಂ.ಎಸ್ ಗಳನ್ನು ಕಡಿತ ಮಾಡುವ ಯೋಚನೆ ಮಾಡುವಂತೆ ಮಾಡಿದೆ !

ಪ್ರತಿ ಕರೆಗೆ ಕೇವಲ 49ಪೈಸೆ
ಎಲ್ಲ ಚನ್ನಾಗಿದೆ ಆದರೆ ದೈನಿಕೆ ಬಾಡಿಗೆ ಒಂದು ರುಪಾಯಿಯಂತೆ ಕಟ್ಟಿದರೆ ಮಾತ್ರವೇ ಉಚಿತ ಎಸ್.ಎಮ್.ಎಸ್ ಮಾಡಲು ಸಾದ್ಯ... ತಿಂಗಳಿಗೆ ಬಾಡಿಗೆ ಮೂವತ್ತು ರುಪಾಯಿ ಕಡ್ಡಾಯ ಎಂದು ಅರ್ಥ!

I FEEL INDIAN MOBILE CUSTOMERS DONT GET 80% SATISFACTORY SERVICE FROM ANY MOBILE COMPANY!

ಈವತ್ತಿನವರೆಗೂ ಭಾರತದಲ್ಲಿನ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಒಂದಿದ್ದರೆ ಒಂದಿಲ್ಲ ಎನ್ನುವ ಸೂತ್ರದ ಸೇವೆಯನ್ನೇ ಒದಗಿಸುತ್ತ ಬಂದಿವೆ.. !
ಕರೆ ದರಗಳು ಕಡಿಮೆ ಇದ್ದಲ್ಲಿ SMS ದರ ಅದಿಕವಾಗಿರುತ್ತದೆ ಉದಾಹರಣೆಗೆ ಮೊದಲಿದ್ದ Vodafone Student plan ಆಫರ್
100ಉಚಿತ ಎಸ್.ಎಂ.ಎಸ್ ಪ್ರತಿ ದಿನ ಕೇವಲ 1ಪೈಸೆ ದೈನಿಕ ಬಾಡಿಗೆ!
ಈ ಆಫರ್ ಪ್ಲ್ಯಾನ್ ನಲ್ಲಿ ಇರುವವರು ಕರೆ ಮಾಡುವಂತಿಲ್ಲ!, ಬೇರೆಲ್ಲರೂ 30ಪೈಸೆಗೋ ಅಥವಾ ಹೆಚ್ಚೆಂದರೆ 50ಪೈಸೆ ದರದಲ್ಲಿ ಕರೆ ಮಾಡಿದರೆ ಈ ಪ್ಲ್ಯಾನ್ ನಲ್ಲಿ ಇರುವವನ ಕರೆ ದರ 1ರುಪಾಯಿ ಆಗಿರುತ್ತದೆ, ಸ್ಥಿರ ದೂರವಾಣಿಗೆ 2ರುಪಾಯಿ ಶುಲ್ಕವಿರುತ್ತದೆ.. ಇನ್ನು 30ಪೈಸೆ ಕರೆ ದರದ Tariff ಹೊಂದಿದ ಗ್ರಾಹಕನ ಎಸ್ ಎಮ್.ಎಸ್ ಗೆ 1ರುಪಾಯಿ ದರ ಪ್ರತಿ ಸಂದೇಶಕ್ಕೆ ಚಾರ್ಜ್ ಮಾಡಲಾಗುತ್ತದೆ! ಅಂದರೆ ಈ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕರೆ ಮಾಡಲು ಕೊಟ್ಟಿರುವುದರಿಂದ ಸಂದೇಶ ಕಳಿಸಲು ದುಬಾರಿ ಬೆಲೆ ತೆರಲೇ ಬೇಕು ಎನ್ನುವ ದೊರಣೆಯೇ??!! ಇದಿಷ್ಟೆ ಅಲ್ಲದೆ ಪ್ರತಿ ಮೊಬೈಲ್ ಕಂಪನಿಗಳು ಗ್ರಾಹಕರನ್ನು ಯಾವ ರೀತಿ ಸುಲಿಗೆ ಮಾಡಲು ಸಾದ್ಯವೋ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಲೇ ಇರುತ್ತವೆ.

ಇನ್ನು Airtel "Aisi azadi our kahan" ಸ್ಲೋಗನ್ ಹಣೆ ಪಟ್ಟಿಯನ್ನು ಮಾತ್ರ ಹೊತ್ತಿದ್ದು , ತಮ್ಮ ಗ್ರಾಹಕರಿಗೆ ಯಾವ ರೀತಿಯ ಸ್ವಾತಂತ್ರ ನೀಡಿದ್ದಾರೋ ದೇವರಾಣೆಗೂ ಅವರಿಗೂ ಗೊತ್ತಿಲ್ಲ, ಗ್ರಾಹಕರ ಹಣ ದೋಚುವ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಲೇ ಇರುವಲ್ಲಿ Airtel ಮೊದಲನೆ ಸ್ಥಾನ ಪಡೆದುಕೊಂಡಿದೆ,ಇದ್ದ ಬದ್ದ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕ ಸೇವೆಯ ಕೋರಿಕೆ ಸಲ್ಲಿಸದಿದ್ದರು Activate ಮಾಡಿ ನೀವೇ ಮಾಡಿಕೊಂಡಿದ್ದೀರಿ ಎಂದು ಉಡಾಫೆ ಉತ್ತರಗಳನ್ನು ಕೊಡುವಲ್ಲಿ ಏರ್ಟೆಲ್ ಗ್ರಾಹಕ ಸೇವಾ ಕೇಂಧ್ರದವರದ್ದು ಎತ್ತಿದ ಕೈ.

ನಿಮಗಿಲ್ಲಿ ಪ್ರಶ್ನೆ ಕಾಡುತ್ತಿರಬಹುದು?
ಹೌದು Airtel ಬಗ್ಗೆ ಇಷ್ಟು ಬರೆಯುತ್ತಿರಲ್ಲ ಬರಿ ಕತೆಯೋ? ಕೇಳಿದರೆ "ಇದು ಕತೆ ಅಲ್ಲ ನನ್ನ ಸ್ವಂತ ಅನುಭವ" !!, ಇನ್ನೊಂದು ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ.. ನನ್ನ Airtel ನಂಬರ್ ನ validity ಪ್ರತಿ ಬಾರಿ ಮುಗಿದ ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಲು ಹೋದರೆ.."This service not available,Please recharg your account to get this service" ಅಂತಲೇ ಬರುತ್ತದೆ..ಅಂದರೆ ಗ್ರಾಹಕ ಸೇವಾ ಕೇಂದ್ರಕ್ಕೆ(Call Center) ಕರೆ ಮಾಡಲು ಸಹ validity ಮತ್ತು ಅಕೌಂಟ್ನಲ್ಲಿ ಸಾಕಷ್ಟು ಮೊತ್ತ ಇರಲೇ ಬೇಕು ಅಂತಲೋ?!!! ನನಗಿನ್ನೂ ಅರ್ಥವಾಗಿಲ್ಲ![validity ಇದ್ದಾಗಲೂ ಕಾಲ್ ಸೆಂಟರ್ ನವರೊಂದಿಗೆ ಸಂಪರ್ಕ ಅಪರೂಪಕ್ಕೆ ಸಿಕ್ಕುತ್ತದೆ ಅದು ಬೇರೆಯ ವಿಚಾರ] ಭಾರತದಲ್ಲಿ ಯಾವಾಗ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದ ಸಂತೃಪ್ತಿದಾಯಕ ಸೇವಾ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಂದರೆ ಗ್ರಾಹಕರಿಗೆ ಹೊರೆಯಾಗದ ವೆಚ್ಚದಲ್ಲಿ ಒದಗಿಸುತ್ತವೆಯೋ ಕಾದು ನೋಡಬೇಕಾಗಿದೆ!ಇದಕ್ಕೆ ಹೊಸದೊಂದು ಮೊಬೈಲ್ ಕ್ರಾಂತಿಯೇ ನಡೆಯಬೇಕೇನೋ!!!


For BSNL EXCEL PREPAID AND BSNL ANANTH USERS ONLY!
To activate BSNL free missed call sms alert" when you are out off coverage area or switched off.. get sms containing missed call number along with the time... all above service is free..
To activate go to Call divertion on your handset, in "when out of coverage or not reachable" section input 009117010 send request


ನೀವು ಬಿ.ಎಸ್.ಎನ್ .ಎಲ್ ನ ಎಕ್ಸೆಲ್ ಪ್ರೀಪೇಯ್ಡ್ ಸ್ಕೀಮಿನ ಗ್ರಾಹಕರಾಗಿದ್ದರೆ ಸ್ಥಳೀಯ 2 ನಂಬರುಗಳಿಗೆ 20ಪೈಸೆಯ# ಕರೆ ದರ ಪಡೆಯಲು ಮತ್ತು ಪ್ರೀಪೇಯ್ಡ್ ಅನಂತ್ ಸ್ಕೀಮಿನ ಗ್ರಾಹಕರಾಗಿದ್ದರೆ ಎರೆಡು ನಂಬರ್ ಗಳಿಗೆ 50ಪೈಸೆಯ ದರದಲ್ಲಿ ಕರೆ ಮಾಡಲು ರಿಜಿಸ್ಟರ್ ಮಾಡಿಕೊಳ್ಳಬೇಕಾದ ವಿಧಾನ


FFE ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು ಮತ್ತೊಂದು ಮೊಬೈಲ್ ಸಂಖ್ಯೆ ಅಥವಾ ಇನ್ನೊಂದು ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ ಅದನ್ನು 53733 ಉಚಿತ ಸೇವೆಯ ನಂಬರಿಗೆ ಕಳಿಸಿ..
Send sms in the format below
FFE landline number along with std code mobile number or another landline number along with std code
Send it to 53733 toll free number

For example: FFE 0802xxxxxxx 9xxxxxxxxx
FFE 0802xxxxxxx 081832xxxxx *
* i have shown x insted of numbers, also shown std code and number of digits of land line Varies from place to place.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನೀವು ನೋಂದಣಿ ಮಾಡಿದ ಎರೆಡು ನಂಬರುಗಳನ್ನು ಮುಂದಿನ ಆರು ತಿಂಗಳವರೆಗೆ ಬದಲಾಯಿಸುವಂತಿಲ್ಲ. #ಎರಡು ನಂಬರುಗಳಿಗೆ ಕರೆ ದರ 10ಪೈಸೆ ಬದಲಾಗಿ 20ಪೈಸೆ ಆಗಿದ್ದು ಈಗ 1oಪೈಸೆ ದುಬಾರಿಯಾಗಿದೆ.
ಬಿ.ಎಸ್.ಎನ್ .ಎಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಚಿತ ಕರೆ ಮಾಡಿ 94000 24365

ಇಳೆಯ ಚುಂಬಿಸಿದ ಮಳೆ

ತಿಳಿ ನೀಲಿ ಬಾನಂಗಳದ ತುಂಬೆಲ್ಲಾ ಕಾರ್ಮೋಡ ಕವಿಯುತಲಿರಲು
ಆ ಮೋಡ ಕರಗಿ ಮಳೆ ಹನಿ ಹನಿಯುತಲಿರಲು
ಎದ್ದಿದೆ ಆವಿಯ ಉಗಿಯು...
ತಂಪನೀಯುತಿದೆ ಭೂಮಿತಾಯ ಒಡಲಿಗೆ...

ಚಿಲಿ ಪಿಲಿ ಗುಟ್ಟುತ ಅವಸರದಿ
ಗೂಡನು ತಲುಪುವ ಕಾತುರದಲಿ ಹಾರುತಿವೆ ಹಕ್ಕಿಗಳ ಗುಂಪು...
ಈ ಸುಂದರ ದೃಶ್ಯವ ನೋಡಲು ಸಾಲದು ಬರಿ ಎರೆಡು ಕಣ್ಣು !

ವರುಣನ ಕೃಪೆಗಾಗಿ ಕಾಯುತಲಿದ್ದ ರೈತರ ಮೊಗದಲಿ ಮೂಡಿದೆ ಹರ್ಷೋದ್ಗಾರ...
ನೆಟ್ಟಿಯ ಆರಂಭಿಸಿದರು ಹೇಳುತ "ಬಿತ್ತನೆಗೆ ನಮಗಿಲ್ಲವಿನ್ನು ಮಳೆಯ ಚಿಂತೆ" ಎಂದು.

ಆ ಸೂರ್ಯನು ಮರೆಯಲಿ ನಿಂತು
ಬಾನ ಅಂಗಳದಿ ಮೂಡಿಸಿದನು ಮನ ಮೋಹಕ ಕಾಮನಬಿಲ್ಲು...
ನೋಡುತ ನಿಂತೆನು ನಾ ಮೈ ಮರೆತು...

Thursday, August 28, 2008

ಮನಸಿಗೊಂದು ಬುದ್ದಿ ಮಾತು !!

ಅತಿಯಾಗಿ ನೀ ಎಲ್ಲರ ಹಚ್ಚಿಕೊಳ್ಳುವೆ ಏಕೆ?

ಮಿತಿ ಮೀರಿ ಮಾತಾಡುವೆ ಏಕೆ? ಅತಿ ಸುಕ್ಷ್ಮಿ ನೀ ಯಾಕಾದೆ?

ಮತ್ತೊಬ್ಬರ ಮಾತನು ನೀ ಯಾಕೆ ಅಪಾರ್ಥ ಮಾಡಿಕೊಳ್ಳುವೆ ?!

ನೀನೇಕೆ ದುಡುಕಿ ಮಾತಾಡಿ ನೋವ ನೀಡಿ ನೋವ ಏಕೆ ತಿನ್ನುವೆ ?!

ಓ ಮನಸೇ ನಿನ್ನ ಯೋಚನೆಯ ಲಹರಿಯ ಬದಲಾಯಿಸಿ ನೋಡು..


ನೀ ಕೊಂಚ ತಾಳ್ಮೆಯ ತಂದು ಕೊಂಡು

ನೋಡುವ ಭಾವನೆಯ ಬದಲಿಸಿ ನೋಡು...

ಜಗವೇ ಸುಂದರ ಎನಿಸದಿರದು....

ಮಾತಿನಲಿ ಜೇನ ಸಿಹಿ ಪಡೆವೆ

ನೋಟದಲಿ ಮೆಚ್ಚುಗೆಯ ಪಡೆವೆ

ಬಾಳೊಂದು ಸುಂದರ ಕಾವ್ಯ ಎನಿಸುವುದು .

Tuesday, August 5, 2008

ಮಧುರ ಕ್ಷಣ!

ಮಲ್ಲಿಗೆಯ ಮೊಗ್ಗಿನ ದಂಡೆಯ ನೀ ಮುಡಿದು ಬರಲು
ಮೊಗದಲಿ ಅರಳಿದೆ ನಗು ಮಲ್ಲಿಗೆ ಹೂವು!
ಜೇನು ತುಂಬಿದ ನಿನ್ನ ಕೆಂದುಟಿಯು ಅದುರತಲಿರಲು
ಹೊರ ಹೊಮ್ಮಿದೆ ಮಧುರ ದ್ವನಿಯು...

ನಿನ್ನಂದಕೆ ನಾ ಮರುಳು
ನಿನ್ನ ಕುಡಿ ಕಣ್ಣೋಟ ನನ್ನಲಿ ಹೊಸ ಬಾವನೆಯ ತಂದಿಹುದು
ಹೃದಯ ಹುಚ್ಚೆದ್ದು ಕುಣಿಯುತಲಿಹುದು..

ನಮ್ಮಿಬ್ಬರ ಕಣ್ಣುಗಳು ಮೌನದಲಿ ಮಾತನಾಡುತಿವೆ ..
ಮಾತುಗಳೇ ಹೊರಡದೆ ನಾವಿಬ್ಬರೂ ಹತ್ತಿರ ಬಂದು
ನಿಂತುಬಿಟ್ಟೆವು ಒಬ್ಬರೊಬ್ಬರ ಕೈ ಹಿಡಿದು!

ಕಸಿವಿಸಿ..

ಹೃದಯ ಇಂದೇಕೆ ತಾಳ ತಪ್ಪಿ ಬಡಿಯುತಿಹುದು
ಮನಸಿನೊಳಗೆ ಹೇಳಲಾಗದ ಕಿರಿ ಕಿರಿಯು ತುಂಬಿಹುದು
ಮೆದುಳಿನಾಳದಲಿ ಮಡುಗಟ್ಟಿಹುದು ನೋವ ಬಿಂದು
ಮಳೆಯ ನಿರೀಕ್ಷೆಯಲಿ ನೊಂದ ಮನವು
ಮಳೆಯ ನೆನೆಯುತಿದೆ !
ಮಳೆ ಹನಿಯೊಳಗೆ ನೆನೆಯುತ ಕಣ್ಣಂಚಲಿ ಜಿನುಗುತಿರುವ ಕಣ್ಣೀರ
ಯಾರಿಗೂ ಕಾಣದಂತೆ ಹೊರ ಹಾಕಲು !

Sunday, July 27, 2008

ಮೊಬೈಲ್ ರಗಳೆ ಮತ್ತು ಮಾಹಿತಿ?!

ಇವತ್ತು ಮೊಬೈಲ್ ಇಲ್ಲದೆ ಜೀವನ ಮುಂದೆ ಸಾಗುವುದೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಾವು ಮೊಬೈಲ್ ನ ಮೇಲೆ ಅವಲಂಬಿತವಾಗಿದ್ದೇವೆ.. ಸಂಪರ್ಕ ಸಾದಿಸುವ ಬಹು ಮುಖ್ಯ ಅಂಗ ಈ ಸಂಚಾರಿ ದೂರವಾಣಿ ಎಂದರೆ ತಪ್ಪಾಗಲಾರದು, ಇಂದು ಉನ್ನತ ತಂತ್ರಜ್ಞಾನದ ಮೊಬೈಲ್ ಸಾದನಗಳು ಅಗ್ಗದ ದರಗಳಲ್ಲಿ ದೊರೆಯುತ್ತಿವೆ...ಮೊಬೈಲ್ ಕಂಪೆನಿಗಳು ಉತ್ಕೃಷ್ಟ ದ್ವನಿ ಸ್ಪಷ್ಟತೆ, ಬರಿ ಎಸ್.ಎಂ.ಎಸ್ ಅಲ್ಲದೆ ಎಮ್.ಎಮ್.ಎಸ್, ಜಿ ಪಿ ಆರ್ ಎಸ್ ನಂತ ಮೂರನೇ ತಲೆಮಾರಿನ ಸೇವೆಗಳನ್ನು ಒದಗಿಸುತ್ತಿವೆ.. ಅತ್ಯುತ್ತಮ ಸಿಗ್ನಲ್ ಕವರೇಜ್* (*ಸಿಟಿ ಲಿಮಿಟ್ ನಲ್ಲಿ )ನೀಡಲು ಶಕ್ತವಾಗಿವೆ
ಈಗ ಮೊಬೈಲ್ ಒಂದಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸದೇ ಇರದು!



(ವ್ಯಂಗ್ಯಚಿತ್ರಕಾರರ ಅನುಮತಿಯಿಲ್ಲದೆ ಚಿತ್ರ ಬಳಸಿಕೊಂದಿದ್ದಕ್ಕೆ ಕ್ಷಮೆ ಕೋರುತ್ತೇನೆ)



ಇದು ಮೊಬೈಲ್ ಜಗತ್ತಿನ ಮೇಲಿನ ನೋಟ! ಮೊಬೈಲ್ ಕಂಪೆನಿಗಳ ಉಪದ್ರವಕ್ಕೆ ಒಳಗಾದ ಗ್ರಾಹಕರು ಅದೆಷ್ಟಿರಬಹುದು? ನೂರಕ್ಕೆ ತೊಂಬತ್ತೆಂಟು ಜನ ಗ್ರಾಹಕರು ಮೊಬೈಲ್ ಕಂಪೆನಿಗಳಿಂದ ಒಂದಲ್ಲ ಒಂದು ಬಾರಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ ಎನ್ನುವುದು ನನ್ನ ಅನಿಸಿಕೆ! ಕಡೆಯ ಪಕ್ಷ ಕೆಲವೊಮ್ಮೆ ಒಂದು ಎಸ್.ಎಂ ಎಸ್ಸು ಕಳಿಸಲಾಗದೆ ಪರೆದಾಡಿರುತ್ತಾರೆ!


ಮೊಬೈಲ್ ಸಿಂ ಕಾರ್ಡ್ ಆಕ್ಟಿವೇಶನ್ ಆದ ತಕ್ಷಣದಿಂದಲೇ ಮೊಬೈಲ್ ಕಂಪೆನಿಗಳ ಉಪದ್ರಗಳು ಆರಂಭವಾಗಿ ಬಿಡುತ್ತವೆಯೇನೋ?! 2 ದಿನದೊಳಗೆ
ಅಡ್ರೆಸ್ಸ್ ಪ್ರೂಫ್ ಕೊಟ್ಟಿಲ್ಲ ಎನ್ನುವ ತಕರಾರಿನ ಕರೆ ಬರಬಹುದು, ಕಾಲ್ ಸೆಂಟರ್ ನಿಂದ! ಇಲ್ಲ ಸಬ್ಮಿಟ್ ಮಾಡಿದ್ದೇವೆ ಎಂದು ಸಮಜಾಯಿಷಿ ಕೊಟ್ಟರೆ ಮುಗಿಯಿತು ಎಂದು ಕೊಂಡಿರ?...ಊಹು ಮತ್ತೊಂದು ಎರೆಡು ಮೂರು ದಿನ ಬಿಟ್ಟು ಅಡ್ರೆಸ್ಸ್ ಪ್ರೂಫ್ ನ ವೆರಿಫಯ್ ಮಾಡಿ ಎನ್ನುವ ಕರೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ, ಇಲ್ಲಿ ಅಕಸ್ಮಾತ್ ಅಡ್ರೆಸ್ಸ್ ಪ್ರೂಫ್ನಲ್ಲಿನಲ್ಲಿ ಇದ್ದ ಹಾಗೆ ಹೇಳದೆ ಹೋದರೆ 2ಗಂಟೆಯೊಳಗೆ ನಿಮ್ಮ Outgoing ಸೇವೆ ಬ್ಲಾಕ್ ಆಗಿರುತ್ತದೆ!


ಇನ್ನು ಕೆಲವು ಕಸ್ಟಮರ್ ಕೇರ್ ನ ಗ್ರಾಹಕ ಸ್ನೇಹಿ ಎಕ್ಸಿಕ್ಯೂಟೀವ್ ಗಳು ನಾವಂದುಕೊಂಡಿದ್ದಕ್ಕಿಂತ ಬೇಗನೆ ನಮ್ಮ ದೂರುಗಳನ್ನು ಪರಿಹರಿಸುತ್ತಾರೆ ಹಾಗು ಅರ್ಥವಾಗುವಂತೆ ಮಾಹಿತಿಯನ್ನು ನೀಡುತ್ತಾರೆ

ಮೊಬೈಲ್ ಕಂಪೆನಿಗಳು ಕಾಲರ್ ಟ್ಯೂನ್ ನಿಂದ ಅತ್ಯದಿಕ ವರಮಾನಗಳನ್ನು ಪಡೆಯುತ್ತಿವೆ, ಸ್ವಯಂಚಾಲಿತ ಕರೆಗಳು ನಿಮಗೆ ಕಂಪನಿಯ ವತಿಯಿಂದ ಮಾಡಲಾಗುತ್ತದೆ ಕಾಲರ್ ಟ್ಯೂನ್ ಗಳನ್ನು ಹಾಕಿಸಿಕೊಳ್ಳುವಂತೆ ಮಾಡಲು " ನಿಮಗೆ ಕರೆ ಮಾಡುವವರಿಗೆ ಅದೇ ಹಳೆಯ ಟ್ರಿಂಗ್ ಟ್ರಿಂಗ್ ರಿಂಗ್ ಕೇಳಿಸಿ ಬೋರ್ ಆಗಿದೆಯೇ.. ನಿಮ್ಮ ಮೆಚ್ಚಿನ ಗೀತೆಯನ್ನು ಕೇಳಿಸಿರಿ " ಎಂದು ಮಧುರವಾದ ದ್ವನಿ ಉಲಿಯುತ್ತದೆ.. ಹಾಗು ಕೆಲವು ಗೀತೆಗಳನ್ನು ನಿಮಗೆ ಉಚಿತವಾಗಿ ಕೇಳಿಸಲಾಗುತ್ತದೆ.. ಆಯ್ಕೆಯು ಅತ್ಯಂತ ಸರಳ.. ಈಗ ಕೇಳಿದ ಹಾಡನ್ನು ನಿಮ್ಮ ಮೆಚ್ಚಿನ ಕಾಲರ ಟ್ಯೂನ್ ಆಗಿ ಆಯ್ಕೆ ಮಾಡಿಕೊಳ್ಳಲು 1ನ್ನು ಒತ್ತಿ, ಇವೆಲ್ಲವೂ ಕೇವಲ ಮಾಸಿಕ ಮೂವತ್ತು ರೂಪಾಯಿಗಳು ಹಾಗು ಡೌನ್ಲೋಡ್ ಗೆ ಬರಿ ಹದಿನೈದು ರೂಪಾಯಿಗಳನ್ನು ವಿದಿಸಲಾಗುವುದು...." ಇನ್ನೇಕೆ ತಡ ಎಂದು ನೀವು ಕರೆ ದ್ವನಿ(Caller tune) ಸಂಗೀತವನ್ನು ಹಾಕಿಸಿಕೊಳ್ಳುತ್ತೀರಿ... ನೆನಪಿರಲಿ ಪ್ರತಿ ತಿಂಗಳು ನಿಮಗೆ ಮೂವತ್ತು ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ ಹಾಗು ಪ್ರತಿ ಬಾರಿ ನೀವು ಹೊಸ ಸಂಗೀತದ ಆಯ್ಕೆ ಮಾಡಿಕೊಂಡಾಗಲೂ ಹದಿನೈದು ರೂಪಾಯಿಗಳು ಚಾರ್ಜ್ ಆಗುತ್ತದೆ.. ಪ್ರತಿ ಬಾರಿ ನಿಮ್ಮ ಆಯ್ಕೆ ಬದಲಾಯಿಸಲು ಮೂರು ರೂಪಾಯಿ ಪ್ರತಿ ನಿಮಿಷಕ್ಕೆ ಕರೆದರಗಳನ್ನು ವಿದಿಸುವಂತ ನಂಬರಿಗೆ ಕರೆಮಾಡಬೇಕಾಗುತ್ತದೆ!.., ಇದು ನಿಮ್ಮ ಆಯ್ಕೆ ನಿಮ್ಮಿಷ್ಟ ಯಾವ ಹಾಡನ್ನಾದರೂ ಹಾಕಿಕೊಳ್ಳಿ ನನ್ನದೇನು ಆಕ್ಷೇಪಣೆ ಇಲ್ಲ.. ಆದರೆ.. ನಿಮಗೆ ಕರೆ ದ್ವನಿ ಸಂಗೀತ ಬೇಡ ಎನ್ನಿಸಿದ ಕೂಡಲೇ ಸೇವೆಯನ್ನು ರದ್ದುಗೊಳಿಸವುದು ಸ್ವಲ್ಪ ಕಷ್ಟದ ಮಾತೆ ಸರಿ.... ಮತ್ತೆ ನಿಮಿಷಕ್ಕೆ ಮೂರು ರೂಪಯಿಯೋ ಆರು ರೂಪಯಿಯೋ ತೆತ್ತು ಕರೆ ಮಾಡಿ.. ಆಯ್ಕೆಗಳನ್ನು ಒತ್ತುತ್ತಾ ಕನಿಷ್ಟವೆಂದರೂ ಐದರಿಂದ ಆರು ನಿಮಿಷ ಒದ್ದಾಡಿದ ನಂತರ ನಿಮ್ಮ ಅದೃಷ್ಟ ನೆಟ್ಟಗಿದ್ದರೆ ಕರೆ ದ್ವನಿ ಸೇವೆ ರದ್ದಾಗುತ್ತದೆ..... ಇಲ್ಲವಾದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬಿತ್ತೆಂದೇ ಲೆಖ್ಖ!

ಎಷ್ಟು ಸುಲಭವಾಗಿ ಕರೆದ್ವನಿ(Caller Tune) ಸೇವೆ ಲಭ್ಯವಗುತ್ತದೆಯೋ ಅದರಷ್ಟೆ ಕಷ್ಟ ಸೇವೆಯನ್ನು ರದ್ದು ಪಡಿಸುವುದು.. ನಿಮಗೆ ಕರೆದ್ವನಿ ಸೇವೆ ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಬೂಪರು ರದ್ದು ಪಡಿಸುವ ವಿಧಾನವನ್ನು ಎಲ್ಲೂ ಸಹ ತಿಳಿಸುವುದಿಲ್ಲ.. ನೀವೇ ಕಂಪನಿಯ ಸೇವಾ ಕೇಂದ್ರಕ್ಕೆ ಕರೆ ಮಾಡಿ.. ಮಾಹಿತಿ ನೀಡುವವರು ನಿಮ್ಮ ಕರೆಗೆ ಉತ್ತರಿಸುವ ತನಕ ಮೊಬೈಲ್ ದೂರವಾಣಿಯ ಸಂಗೀತ ಆಲಿಸುತ್ತ ಮದ್ಯ ಬರುವ "ನಿಮ್ಮ ಕರೆ ನಮಗೆ ಅಮೂಲ್ಯ ದಯವಿಟ್ಟು ನಿರೀಕ್ಷಿಸಿ" ಎನ್ನುವ ತಾಳ್ಮೆ ಪರೀಕ್ಷೆಯನ್ನು ಮಾಡಿಸಿಕೊಂಡು.. ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಹೇಗೆ ಎಂದರೆ ಇಷ್ಟುದ್ದ ವಿಧಾನವನ್ನು ತಿಳಿಸುತ್ತಾರೆ.. ಸಾಮನ್ಯವಾಗಿ ಅರ್ಥವಗದಂತೆಯೇ ಯತಾವತ್ ಪುಸ್ತಕದ ಬಾಷೆಯಲ್ಲಿ ಮಾಹಿತಿಯನ್ನು ನೀಡುತ್ತಾರೆ. ನೀವು ಏರ್ಟೆಲ್ ನ ಗ್ರಾಹಕರಗಿದ್ದರೆ "ಅದೇನೋ Balence ನೋಡುವ *123# ಕೋಡ್ ನಂತೆ ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಕೋಡ್ ಇದೆಯಲ್ಲ ಅದನ್ನು ಕೊಡಿ ಎಂದು ಕೇಳಿ "ಅದಾ ಎಂದು ರಾಗ ಎಳೆಯುತ್ತ" *106# ಕೋಡು ಕೊಡುತ್ತಾರೆ..ಅದನ್ನು ಡಯಲ್ ಮಾಡಿದರೆ ಯಾವುದೇ ಕರ್ಚಿಲ್ಲದೆ ಮರುಕ್ಷಣವೇ ನಿಮಗೆ ಕರೆ ಮಾಡುವವರಿಗೆ ನಿಮ್ಮ ನೆಚ್ಚಿನ ಟ್ರಿಂಗ್ ಟ್ರಿಂಗ್ ಕೇಳಿಸುತ್ತದೆ!

ಇನ್ನು ಎಸ್.ಎಂ.ಎಸ್ ಸೇವೆಯ ವಿಚಾರಕ್ಕೆ ಬಂದರೆ.. ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ಎಸ್.ಎಂ.ಎಸ್ ಲಭ್ಯವಿರುವುದಿಲ್ಲ.. ಕಾರಣ ಏನೆಂದರೆ.. ಪ್ರತಿಯೊಬ್ಬ ಗ್ರಾಹಕನು ಎಸ್.ಎಂ.ಎಸ್ ಕಳಿಸುವುದರಿಂದ ಸೇವಾ ಕೇಂದ್ರದಲ್ಲಿ ಒಟ್ಟಿಗೆ ಪ್ರವಾಹದಂತೆ ಹರಿದುಬರುವ ಸಂದೇಶಗಳಿಂದ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತದೆ! ಮೇಲಿನ ಕಾರಣವನ್ನೇ ತಿಳಿಸಿ ಮೊಬೈಲ್ ಸೇವಾ ಕಂಪೆನಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಟ್ರೈ ನಿಂದ ಕೂಡ ಹಸಿರು ನಿಶಾನೆ ಪಡೆದು ಟ್ರೈ ನ ಕಣ್ಣಿಗೆ ಮಣ್ಣೆರೆಚಿವೆ... ಟ್ರೈ ಕೂಡ ಮೊಬೈಲ್ ಕಂಪನಿಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿವೆ.. ಯಾವ ಯಾವ ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಸಂದೇಶ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರತಿ ಗ್ರಾಹಕನಿಗೆ ಪೂರ್ವ ಮಾಹಿತಿಯನ್ನು ಒದಗಿಸಬೇಕು ಎಂದು.. ಆದರೆ ಚಾಲಕಿ ಸೇವಾದಾತರುಗಳು.. ಮೊದಲು ಮೊದಲು ಕೆಲವು ಬಾರಿ ಚಾಚು ತಪ್ಪದೆ ಮಾಹಿತಿ ನೀಡುತ್ತಾರೆ.. ಅನಂತರ ನಿಮ್ಮ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿ ಅಕೌಂಟ್ ನ ಬ್ಯಾಲೆನ್ಸ್ ಕಟ್ ಆದ ಮೇಲೆ ತಿಳಿಯುತ್ತದೆ! ಎಸ್.ಎಂ. ಎಸ್ ವಿಚಾರದಲ್ಲೂ ಕೂಡ ಏರ್ಟೆಲ್ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ ನೀವು 3days ಅಂಥ 222 ಗೆ ಎಸ್.ಎಂ ಎಸ್ ಕಳುಹಿಸಿದರೆ ಮುಂದಿನ ಯಾವ ಮೂರು ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಎಸ್.ಎಂ .ಎಸ್ ಸೇವೆ ಇರುವುದಿಲ್ಲ ಎನ್ನುವ ಮಾಹಿತಿ ಹೊತ್ತ ಸಂದೇಶ ನಿಮ್ಮ ಮೊಬೈಲಿನ ಇನ್ ಬಾಕ್ಸ್ ನ ಒಳಗಿರುತ್ತದೆ!
ಆದರೆ.... ಮತ್ತೆ ಏನಪ್ಪಾ ಅಂದ್ರ? ಹೂ ಇಲ್ಲೂ ಇದೆ ರಹಸ್ಯ.. 3 ದಿನಗಳ ಪಟ್ಟಿ ಒಮ್ಮೆ ಪ್ರಕಟವಾದರೆ.. ಮುಂದಿನ ಪಟ್ಟಿ ಬಿಡುಗಡೆ ಆದಾಗ ಈ ಹಿಂದೆ ನೀಡಿದ ದಿನಾಂಕದ ಮುಂದಿನ ಅಥವಾ ಹಿಂದಿನ ದಿನಾಂಕದಲ್ಲಿ ರಿಯಾಯಿತಿ ಸಂದೇಶ ಸೇವೆ ಇಲ್ಲದಿದ್ದರೂ.. ಮೊದಲು ತಿಳಿಸಿದ್ದ ದಿನದಲ್ಲೂ ಸೇವೆ ಇರುವುದಿಲ್ಲ! ಹೊಸ ಪಟ್ಟಿಯಲ್ಲಿ ಆ ದಿನಾಂಕ ಇಲ್ಲದಿದ್ದರೂ ಹಿಂದೆಯೇ ಪ್ರಕಟಸಿದ್ದೇವೆ ಎನ್ನುತ್ತಾರೆ !! 1ರೂಪಾಯಿ ಪ್ರತಿ ಸಂದೇಶಕ್ಕೆ ಪಡೆದು ಹಬ್ಬ ಹರಿದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದೆ ತೀರುತ್ತವೆ ಈ ಮೊಬೈಲ್ ಕಂಪೆನಿಗಳು.....

ಇನ್ನು worldcup Cricket ನ ಸಮಯದಲ್ಲಂತೂ ತರಾವರಿ Cricket(ಕ್ರಿಕೆಟ್ಟ) ಪ್ಯಾಕ್ ಗಳನ್ನು ಕಂಪೆನಿಗಳು ಗ್ರಾಹಕರಿಗಾಗಿ ಪರಿಚಯಿಸುತ್ತವೆ... ಈ ವಿಚಾರವನ್ನು ಹೇಳಲು ಒಂದು ಕಾರಣವಿದೆ..ಹಿಂದಿನ ಬಾರಿಯ World cup cricket ನ ಸಮಯದಲ್ಲಿ ನೆಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿಗೆ ರಾತ್ರಿ ೧೨ಘಂಟೆಯ ಸುಮಾರಿನಲ್ಲಿ ಒಂದು ಸಂದೇಶ ಬಂದಿತ್ತು.. ( ಆಗ ಅವನಿಗೆ ಪರೀಕ್ಷೆಯ ಸಮಯವಾದ್ದರಿಂದ ಮಲಗದೇ ಓದುತ್ತಿದ್ದನಂತೆ ).. ಆ ಸಂದೇಶದ ಸಾರಾಂಶವಿಷ್ಟೇ .. ನೀವು ಕೋರಿದ್ದ 60ರುಪಾಯಿಯ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಇದನ್ನು ಅವನು ನನಗೆ ಮರುದಿನ ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿ ಹೇಳಿದೆ " ನೀನು ಎಲ್ಲೋ ಕ್ರಿಕೆಟ್ ಪ್ಯಾಕ್ ಗೆ ಬೇಕು ಎಂದು ಎಸ್.ಎಂ.ಯೇಸ್ಸೋ ಏನೋ ಕಳಿಸಿರುತೀಯ ಎಂದು, " ಅವನು ಹೇಳಿದ್ದು ತಡಿಯಪ್ಪ" ಎಂದು ಇನ್ನೊಂದು ಸಂದೇಶ ತೋರಿಸಿದ ಅದರ ಸಾರಾಂಶ ಏನೆಂದರೆ .. ನೀವು ಬೇಡಿಕೆ ಸಲ್ಲಿಸಿದ್ದ 30ರುಪಾಯಿ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಅವನು ನನ್ನನ್ನು ಕೇಳಿದ್ದಿಷ್ಟು.. ನನಗೇನು ತಲೆ ಇಲ್ಲವೊ ಅತವಾ ದುಡ್ಡು ಜಾಸ್ತಿ ಆಗಿದೆಯೋ ಎಂದುಕೊಂಡೆಯೋ ಎರೆಡೆರೆಡು ಪ್ಯಾಕ್ ಗಳನ್ನು ಒಟ್ಟಿಗೆ Activate ಮಾಡಲು" ಎಂದು!... ಮುಂದೆ ನಾವಿಬ್ಬರು ಮಾಡಿದ ಕೆಲಸ, ಏರ್ಟೆಲ್ ನ ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಚಾರಿಸದರೆ "ನೀವೇ ಎಸ್.ಎಂ.ಎಸ್. ಕಳ್ಸಿದ್ದೀರ" ಇಲ್ಲಿ ಮಾಹಿತಿ ಇದೆ ಎಂದು...! ನಮ್ಮ ಮುಂದಿನ ಪ್ರಶ್ನೆ 6೦ರುಪಾಯಿ ಪ್ಯಾಕ್ನಲ್ಲಿ ಇರುವ ಸೇವೆಗಿಂತ ಹೆಚ್ಚಿನ ಸೇವೆ 3೦ರುಪಾಯಿ ಪ್ಯಾಕ್ನಲ್ಲಿ ಇದೆಯೇ!.. 6೦ರುಪಾಯಿ ಪ್ಯಾಕ್ ಸಾಲದು ಎಂದು ಮೂವತ್ತರ ಪ್ಯಾಕು ಬೇಕು ಎಂದಿದ್ದೆವೆಯೇ ಎಂದು ಕೇಳಿದರೆ.. ಅದೇ ಅಸಡ್ಡೆಯ ಉತ್ತರ "ಇನ್ನು ಸರಿಯಾದ ಮಾಹಿತಿ ದೊರೆಯುತ್ತಿಲ್ಲ 24ಘಂಟೆಯ ನಂತರ ಕರೆ ಮಾಡಿ".. ಹಾಗಾದರೆ ಇಷ್ಟೊತ್ತು ಮಾಹಿತಿ ಇದೆ ಎಂದಿರಲ್ಲ ಎನ್ನುವ ಮೊದಲೇ ಕಾಲ್ disconnect ಆಗಿತ್ತು! 24ಘಂಟೆಯಲ್ಲ 1 ವಾರವಾದರೂ ಸಮರ್ಪಕ ಉತ್ತರ ನೀಡದಿದ್ದಾಗ ಸ್ಥಳೀಯ ಬಳಕೆದಾರರ ವೇದಿಕೆಯ ಮೊರೆ ಹೊಕ್ಕು ಕಂಪನಿಯ ವಿರುದ್ದ ದೂರು ದಾಖಲಿಸಿದ್ದು ಆಗಿತ್ತು.. ಆದರೆ ಗ್ರಾಹಕರ ಹಣ ಕೊಳ್ಳೆಹೊಡೆಯುತ್ತಿರುವ ಕಂಪನಿ ಅಷ್ಟು ಬೇಗನೆ ಜಗ್ಗುತ್ತದೆಯೇ.. ಬರಿ ಪರಿಶೀಲನೆಯ ಉತ್ತರ ಬಂತೆ ವಿನಃ ಪರಿಶೀಲನೆ ಮಾಡಲಿಲ್ಲ.. ಕೊನೆಗೆ ಏನಾಯಿತೋ ಗೊತ್ತಿಲ್ಲ!


ಇಂದು ಗ್ರಾಹಕರ ಸೇವಾ ಕೇಂದ್ರಗಳು ತುಂಬಾ ಅಸಡ್ಡೆಯ ಬಾಯಿಗೆ ಬಂದ ಹಾಗೆ ಉತ್ತರ ನೀಡಿ ಗ್ರಾಹಕರ ಕಂಗೆಣ್ಣಿಗೆ ಗುರಿಯಾಗಿ ಗ್ರಾಹಕರಿಂದ ಬಯ್ಯಿಸಿಕೊಳ್ಳುತ್ತಿವೆ! ಇನ್ನೊಂದು ಮೊನ್ನೆ ಮೊನ್ನೆ ನೆಡೆದ ಘಟನೆಯ ಬಗ್ಗೆ ಹೇಳಲೇ ಬೇಕಾಗಿದೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿನಿಂದ ಹೊರ ಹೋಗುವ ಕರೆಗಳು ಬ್ಲಾಕ್ ಆಗಿದ್ದವು, ಅದಕ್ಕೆ ನನ್ನ ಏರ್ಟೆಲ್ ನಂಬರಿನಿಂದ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬೇರೆ ನಂಬರಿನಿಂದ ಕಂಪ್ಲೆಂಟ್ ತಗೋಳಿ ಎಂದು ನನ್ನ ಗೆಳೆಯನ ನಂಬರ್ ಹೇಳಿದ ತಕ್ಷಣ.. ಅಡ್ರೆಸ್ಸ್ ಹೇಳಿ ಸಾರ್ ಎಂದ.. ನಾನು ಅವನ ಹೆಸರು, ಅಪ್ಪನ ಹೆಸರು.. ಮನೆಯ ಹೆಸರು, ಅಂಚೆ, ಊರು, ತಾಲೂಕು ಜಿಲ್ಲೆ.. ಎಲ್ಲ ಹೇಳಿದ್ದೆ.. ಅತ್ತಲಿಂದ ಕೇಳಿದ್ದೇನು ಎಂದರೆ ಡೋರ್ ನಂಬರ್ ಹೇಳಿ ಎಂದು.. ಸಾಮನ್ಯವಾಗಿ ಹಳ್ಳಿಗಳಲ್ಲಿ ಡೋರ್ ನಂಬರ್ ನ ಬಳಕೆ ಕಡಿಮೆ.. ಅದು ಅಲ್ಲದೆ ನನ್ನ ಗೆಳೆಯ ನೀಡಿದ್ದ ಡ್ರೈವಿಂಗ್ ಲೈಸೆನ್ಸ್ ಅಡ್ರೆಸ್ಸ್ ಪ್ರೂಫ್ ನಲ್ಲಿ ಯಾವುದೇ ಡೋರ್ ನಂಬರ್ರು ನಮೂದಾಗಿರಲಿಲ್ಲ!! ನಾನು ಡೋರ್ ನಂಬರ್ ಕೊಟ್ಟಿಲ್ಲ ಎನ್ನುವ ಮೊದಲೇ... ಬಂದ ಉತ್ತರ ಡೋರ್ ನಂಬರ್ ತಿಳಿದುಕೊಂಡು ಕರೆ ಮಡಿ.. ನಿಮ್ಮ ಕಂಪ್ಲೇಂಟ್ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ನೀಡಿ. ಕಾಟಾಚಾರಕ್ಕೆ ಶುಭದಿನವನ್ನು ಹೇಳಿ.. ಕರೆ ಮುಕ್ತಾಯ ಗೊಳಿಸಿದ! ನಂತರ ಮತ್ತೆ ಕರೆ ಮಾಡಿದಾಗ ಇನ್ನೊಬ್ಬರು ದೂರನ್ನು ದಾಖಲಿಸಿಕೊಂಡರು...


ಹೀಗೆ ಹೇಳುತ್ತಾ ಹೋದರೆ ಮೊಬೈಲ್ ರಗಳೆ ಮುಗಿಯುವುದೇ ಇಲ್ಲ !


Here is Karnataka customer care numbers for you


Bsnl - 9400024365

Hutch(Vodafone ) 111, 9886098860

Airtel 121, 9845098450 9845012345(for post paid )

Tata indicom 12524, 9243012345

Reliance *333 3033 3333
ಏರ್ಟೆಲ್ ಗ್ರಾಹಕರಿಗೆ ಒಂದು ಹೊಸ ಸುದ್ದಿ
*106# ನಿಂದ ನಿಮ್ಮ ಕರೆ ದ್ವನಿ ಸಂಗೀತ ರದ್ದು ಆಗದಿದ್ದರೆ....ಇದನ್ನು ಪ್ರಯತ್ನಿಸಿ ಕಾಲರ್ ಟ್ಯೂನ್ ಕ್ಯಾನ್ಸಲ್ ಮಾಡಲು ಉಚಿತ ಕರೆ 543211808, ಕಾಲರ್ ಟ್ಯೂನ್ ರದ್ದು ಪಡಿಸುವ ಸೇವೆಯನ್ನು ಮಾತ್ರ ಉಪಯೋಗಿಸಿ, ಬೇರೆ ಯಾವ್ಯಾವುದೋ ಆಯ್ಕೆಗಳನ್ನು ಮಾಡಿಕೊಂಡು ನನ್ನನು ಬೈಕೋ ಬೇಡಿ...!