Friday, June 13, 2008

ಕನಸಿನ ಕವನ!

ನಿದ್ರಾದೇವಿಯು ತಬ್ಬಿದ ಮರುಕ್ಷಣವೇ

ಕನಸಿನ ರಾಜ್ಯದ ಆರಂಭ!

ನಿದ್ರಾ ಪರದೆಯ ಮೇಲೆ ಕಲ್ಪನೆಯ ಚಲನಚಿತ್ರಕೆ ಶುಭಾರಂಭ!!

ಆ ಗಾಡ ನಿದ್ದೆಯಲು ನೀ ತಂದೆ..ಮೊಗದಲಿ ಮಂದಹಾಸ

ನೀನಿತ್ತ ಕಚಗುಳಿಯ ಮರೆತಿಲ್ಲ !

ಅರ್ಥವಿಲ್ಲದ ಕನಸುಗಳ ನೀತಂದೆ

ಲಜ್ಜೆಯಿಲ್ಲದ ಕನಸುಗಳ ನೀ ಹೊತ್ತು ತಂದೆ...

ಮಸುಕು ಮಸುಕು ಬೆಳಕಿನಲಿ ಹಲವು ಪಾತ್ರಗಳ ನೀತಂದೆ

ಅರ್ಥವಾಗದೆ ನಾನು ಎದ್ದು ನಿಂತೆ!

ಎಲ್ಲ ಕನಸುಗಳ ನೆನಪಿಲ್ಲ

ಹಲವು ಕನಸುಗಳು ಪೂರ್ಣಗೊಂಡಿಲ್ಲ

ಒಳ್ಳೆಯ ಕನಸುಗಳೆಲ್ಲ ನನಸಾಗಲಿ

ಎಂಬುದೊಂದೇ ಮನದೊಳಗಣ ಆಶಯ.

3 comments:

  1. blog photo super
    kava manasviya mandinda manasige mutide
    good one

    ReplyDelete
  2. "Manaswi" yavare......
    Thumbha danyavadagalu. Ravi kanaddannu Kavi kandha embhanthe adhbutha vagi bhareyuthiddira. ele mareya kayi yanthe agabharadhu neevu. Kannada sahitya da hinnele kutumbha dindha bhandhantha thavu kanndambhege innu hechina seve thammindha agali endhu kelikollutha thammannu abhinandhisuthene. Mundhi na sari sagarakke bhandhaga kandhithavagi betiyaguthene.

    ReplyDelete
  3. ಚೈತನ್ಯ ಅವರೇ ಇಷ್ಟೊಂದು ಪ್ರೀತಿಯಿಂದ ನನ್ನ ಕವನಗಳನ್ನ ಓದುತ್ತಿರುವುದಕ್ಕೆ ನಾನು ಆಭಾರಿ...

    ಪಧಗಳ ಮೇಲೆ ಇನ್ನು ಹಿಡಿತ ಸಾದಿಸುವ ತನಕ ಎಲೆ ಮರೆಯ ಕಾಯಿಯಗಿಯೇ ಇದ್ದು ಮಾಗಿ ರಸ ಭರಿತ ಫಲವಾಗಿ ಹೊರಹೊಮ್ಮುವ ಆಸೆ...
    ಖಂಡಿತ ಬೇಟಿ ಆಗೋಣ
    ನಿಮ್ಮ ಪ್ರೀತಿಯ
    ಮನಸ್ವಿ

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..